Bengaluru

ಶಿವಮೊಗ್ಗ ಗಲಾಟೆ ಪ್ರಕರಣ; ಮಾನಸಿಕ ಸ್ಥಿಮಿತ ಕಳೆದುಕೊಂಡವರ ಕೆಲಸ – ಮಧು ಬಂಗಾರಪ್ಪ

ಬೆಂಗಳೂರು; ಶಿವಮೊಗ್ಗದಲ್ಲಿ ನಿನ್ನೆ ನಡೆದ ಘಟನೆಗೆ ಮತಿ ಸ್ಥಿಮಿತ ಕಳೆದುಕೊಂಡವರೇ ಕಾರಣ. ನಿನ್ನೆ ಕೋಮು ಗಲಭೆ ನಡೆದಿಲ್ಲ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿರುವ ಅವರು, ಗಲಾಟೆಗೆ ಯಾರೋ ಒಂದಿಬ್ಬರು ಕಿಡಿಗೇಡಿಗಳೇ ಕಾರಣ ಎಂದಿದ್ದಾರೆ.

ಶಿವಮೊಗ್ಗದಲ್ಲಿ ಗಣೇಶ ವಿಸರ್ಜನೆ ಹಾಗೂ ಈದ್‌ ಮಿಲಾದ್‌ ಎರಡೂ ಒಂದೇ ದಿನ ಇತ್ತು. ಆದ್ರೆ ನಾವು ಸಭೆ ನಡೆಸಿದ ನಂತರ ಮುಸ್ಲಿಮರು ಈದ್‌ ಮಿಲಾದ್‌ ಮೆರವಣಿಗೆ ಭಾನುವಾರ ಮಾಡೋದಕ್ಕೆ ಒಪ್ಪಿಕೊಂಡರು. ಇಲ್ಲಿ ಹಿಂದೂ ಹಬ್ಬದ ಆದರೆ ಮುಸ್ಲಿಮರನ್ನು ಕರೆಯುತ್ತಾರೆ. ಮುಸ್ಲಿಂ ಹಬ್ಬ ಆದ್ರೆ ಹಿಂದೂಗಳನ್ನು ಕರೆಯುತ್ತಾರೆ. ಎಲ್ಲರೂ ಅನ್ಯೋನ್ಯವಾಗಿದ್ದಾರೆ. ಆದ್ರೆ ಯಾರೋ ಒಂದೆರಡು ಕಿಡಿಗೇಡಿಗಳು ಈ ರೀತಿ ಮಾಡಿದ್ದಾರೆ ಎಂದು ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.

ಕಿಡಿಗೇಡಿಗಳು ಮನೆಗಳಿಗೂ ನುಗ್ಗಿದ್ದಾರೆ. ಗಲಭೆ ಮಾಡಿದ್ದಾರೆ.  ರಾಗಿಗುಡ್ಡದಲ್ಲಿ ಮಾತ್ರ ಈ ರೀತಿಯ ಘಟನೆ ನಡೆದಿದೆ. ಗಲಾಟೆ ಮಾಡೋದಕ್ಕಾಗಿಯೇ ಜನ ಹೊರಗಿನಿಂದ ಬಂದಿದ್ದರು ಎಂದು ಸ್ಥಳೀಯ ಶಾಸಕರು ಆರೋಪ ಮಾಡಿದ್ದಾರೆ. ಆದ್ರೆ ಇದೆಲ್ಲಾ ಸುಳ್ಳು. ಜವಾಬ್ದಾರಿಯುತ ಸ್ಥಾನದಲ್ಲಿದ್ದವರು ಪ್ರತಿಯೊಂದರಲ್ಲೂ ರಾಜಕೀಯ ಮಾಡಬಾರದು. ಇಂತಹ ಪ್ರಚೋದನಾಕಾರಿ ಹೇಳಿಕೆ ಕೊಡಬಾರದಿತ್ತು ಎಂದು ಮಧು ಬಂಗಾರಪ್ಪ ಹೇಳಿದ್ದಾರೆ.

 

Share Post