Bengaluru

ಪಠ್ಯ ಪರಿಷ್ಕರಣೆ ಬಗ್ಗೆ ಸಾರ್ವಜನಿಕರಿಂದ ಅಭಿಪ್ರಾಯ ಸಂಗ್ರಹ; ಶಿಕ್ಷಣ ಸಚಿವ

ಬೆಂಗಳೂರು; ಶಾಲಾ ಪಠ್ಯ ಪರಿಷ್ಕರಣೆ ಬಗ್ಗೆ ಕೆಲವರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಬಗ್ಗೆ ಸಾರ್ವಜನಿಕ ಅಭಿಪ್ರಾಯ ಸಂಗ್ರಹಿಸಲು ಮುಂದಾಗಿದ್ದೇವೆ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ ಹೇಳಿದ್ದಾರೆ.

ಸಿಎಂ ಬೊಮ್ಮಾಯಿ ಭೇಟಿ ಮಾಡಿ, ಮಾತುಕತೆ ನಡೆಸಿದ ನಂತರ ಮಾತನಾಡಿದ ಅವರು, ಹಿಂದಿನ  ಪರಿಷ್ಕರಣಾ ಸಮಿತಿ ಯಾವುದನ್ನು ಕೈಬಿಟ್ಟರು, ಏನನ್ನು ಸೇರಿಸಿದರು..? ನಾವು ಯಾವುದನ್ನು ಕೈಬಿಟ್ಟಿದ್ದೇವೆ, ಏನನ್ನು ಸೇರಿಸಿದ್ದೇವೆ ಎಂಬುದನ್ನು ಜನರ ಮುಂದೆ ಇಡುತ್ತೇವೆ. ನಮ್ಮದು ಸರಿಯೋ ಅವರದು ಸರಿಯೋ ಎಂದು ಜನರೇ ನಿರ್ಧಾರ ಮಾಡಲಿ ಎಂದು ಹೇಳಿದರು.

 

Share Post