Bengaluru

ಬಾಲ ಪ್ರತಿಭೆ ಸಮನ್ವಿಗೆ ಕಣ್ಣೀರ ವಿದಾಯ: ಸೆಲೆಬ್ರೆಟಿಗಳು ಭಾವುಕ

ಬೆಂಗಳೂರು: ನಿನ್ನೆ ರಸ್ತೆ ಅಪಘಾತದಲ್ಲಿ ಮೃತಪಟ್ಟ ನನ್ನಮ್ಮ ಸೂಪರ್‌ ಸ್ಟಾರ್‌ ಖ್ಯಾತಿಯ ಪುಟ್ಟ ಬಾಲಕಿ ಸಮನ್ವಿ ಅಂತ್ಯಕ್ರಿಯೆ ಬನಶಂಕರಿ ಚಿತಾಗಾರದಲ್ಲಿ ನೆರವೇರಿದೆ. ಬಣಜಿಗ ಸಂಪ್ರದಾಯದಂತೆ ಅಂತಿಮ ವಿಧಿವಿಧಾನಗಳು ನೆರವೇರಿವೆ. ಸಮನ್ವಿ ತಂದೆ ಚಿತೆಗೆ ಬೆಂಕಿ ಹಚ್ಚಿ ಅಂತ್ಯಕ್ರಿಯೆ ನೆರವೇರಿಸಿದ್ದಾರೆ. ಚಿತಾಗಾರದ ಬಳಿ ಕುಟುಂಬಸ್ಥರು, ಅಭಿಮಾನಿಗಳು, ಸೆಲೆಬ್ರೆಟಿಗಳ ಆಕ್ರಂದನ ಮುಗಿಲು ಮುಟ್ಟಿತ್ತು. ಏನೂ ಅರಿಯದ ವಯಸ್ಸಿನ ಪುಟ್ಟ ಬಾಲಕಿ ಸಾವು ನ್ಯಾಯವಾ..? ಎಂದು ಕಣ್ಣೀರು ಹರಿಸಿದ್ದಾರೆ.

ಇನ್ನೂ ಬಾಲಕಿ ಸಾವಿಗೆ  ನನ್ನಮ್ಮ ಸೂಪರ್‌ ಸ್ಟಾರ್‌  ರಿಯಾಲಿಟಿ ಶೋನ ಜಡ್ಜ್‌, ನಿರೂಪಕಿ, ಪ್ರತಿಸ್ಪರ್ಧಿಗಳು ಸೇರಿದಂತೆ ಕಿರುತೆರೆಯಲ್ಲಿ ಮೌನ ಆವರಿಸಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸೃಜನ್‌ ಲೋಕೇಶ್‌, ಅಪ್ಪು ನಿಧನದಲ್ಲೇ ದೇವರಿದ್ದಾನೆ ಎಂಬ ಪ್ರಶ್ನೆ ಕಾಡಿತ್ತು. ಈಗ ಮಗು ಸಮನ್ವಿ ಸಾವು ನಿಜಕ್ಕೂ ನನ್ನನ್ನು ತುಂಬಾ ಡಿಸ್ಟರ್ಬ್‌ ಮಾಡಿದೆ. ವಿಚಾರ ತಿಳಿಯುತ್ತಿದ್ದಂತೆ ರಾತ್ರಿಯಿಡೀ ನಿದ್ರೆ ಬಂದಿಲ್ಲ. ದೇವರಿಗೆ ಕರುಣೆ ಅಲ್ಲ. ದೇವರು ಇಲ್ಲ ಎಂಬ ನಿರ್ಣಯಕ್ಕೆ ಬರುವ ಪರಿಸ್ಥಿತಿ ಎದುರಾಗಿದೆ. ಶೋನಲ್ಲಿ ಬಹಳ ಆಕ್ಟೀವ್‌ ಆಗಿ ಇರುತ್ತಿದ್ದ ಮಗು ಅವಳು. ಇದ್ದಕ್ಕಿದ್ದಂತೆ ಇವತ್ತು ಅವಳಿಲ್ಲ ಎಂಬ ವಿಚಾರವನ್ನು ಅರಗಿಸಿಕೊಳ್ಳಲು ಆಗ್ತಿಲ್ಲ ಎಂದು ಭಾವುಕರಾಗಿದ್ದಾರೆ. ನಟಿ, ತಾರಾ. ಅನುಪ್ರಭಾಕರ್‌, ನಿರೂಪಕಿ ಅನುಪಮಾ ಸೇರಿದಂತೆ ಇಡೀ ಶೋನ ಸ್ಪರ್ದೀಗಳಲ್ಲಿ ಕಾರ್ಮೋಡ ಸರಿದಿದೆ.

ಸಮನ್ವಿ ತಾಯಿ ಅಮೃತಾ ನಾಲ್ಕು ತಿಂಗಳ ಗರ್ಭಿಣಿ ಮನೆಯಲ್ಲಿ ಸಂತೋಷದ ವಾತಾವರಣ ಮೂಡುವ ಮುನ್ನವೇ ಇಂಥದ್ದೊಂದು ಕಪ್ಪು ಛಾಯೆ ಆವರಿಸಿದೆ. ಲಾರಿ ಚಾಲಕನ ಅಜಾಗೃತೆಯಿಂದ ಊಜ್ವಲ ಭವಿಷ್ಯ ಹೊಂದಿದ್ದ ಮಗು ಇಂದು ಮಸಣ ಸೇರುವ ಪರಿಸ್ಥಿತಿ ಬಂದಿದೆ.

Share Post