BengaluruPolitics

ರಾಜ್ಯಸಭಾ ಚುನಾವಣೆ; ಸಿದ್ದರಾಮಯ್ಯ ಮನೆಗೆ ಜೆಡಿಎಸ್‌ ನಾಯಕರು

ಬೆಂಗಳೂರು; ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಕಣಕ್ಕಿಳಿಸಿರುವ ಎರಡನೇ ಅಭ್ಯರ್ಥಿಯ ನಾಮಪತ್ರ ವಾಪಸ್‌ ತೆಗೆಸಲು ಜೆಡಿಎಸ್‌ ಸಂಧಾನಕ್ಕೆ ಮೊರೆ ಹೋಗಿದೆ. ಜೆಡಿಎಸ್‌ಗೆ ಟಾಂಗ್‌ ಕೊಡಲು ಸಿದ್ದರಾಮಯ್ಯ ಅವರು ಮನ್ಸೂರ್‌ ಖಾನ್‌ ಅವರಿಗೆ ಟಿಕೆಟ್‌ ಕೊಡಿಸಿದ್ದರು. ಇದೀಗ ಜೆಡಿಎಸ್‌ ನಾಯಕರು, ಸಿದ್ದರಾಮಯ್ಯ ಅವರೊಂದಿಗೆ ಸಂಧಾನಕ್ಕೆ ಮುಂದಾಗಿದ್ದಾರೆ. ಹೀಗಾಗಿ, ಸಿದ್ದರಾಮಯ್ಯ ಅವರ ಮನೆಗೆ ಜೆಡಿಎಸ್‌ ನಾಯಕರಾದ ಟಿ.ಎ.ಶರವಣ ಹಾಗೂ ಬಿ.ಎಂ.ಫಾರೂಕ್‌ ಭೇಟಿ ನೀಡಿದ್ದಾರೆ.

 

ಮಾಜಿ ಸಚಿವ ಹೆಚ್‌.ಡಿ.ರೇವಣ್ಣ ಅವರೇ ಸಿದ್ದರಾಮಯ್ಯ ನಿವಾಸಕ್ಕೆ ಭೇಟಿ ನೀಡಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಕಡೇ ಕ್ಷಣದಲ್ಲಿ ಶರವಣ ಹಾಗೂ ಬಿ.ಎಂ.ಫಾರೂಕ್‌ ಅವರನ್ನು ಸಿದ್ದರಾಮಯ್ಯ ಅವರ ಶಿವಾನಂದ ಸರ್ಕಲ್‌ ಬಳಿಯ ಸರ್ಕಾರಿ ನಿವಾಸಕ್ಕೆ ಕಳುಹಿಸಲಾಗಿದೆ. ಇಬ್ಬರೂ ನಾಯಕರು, ಸಿದ್ದರಾಮಯ್ಯ ಮನವೊಲಿಸಲು ಪ್ರಯತ್ನಿಸುತ್ತಿದ್ದಾರೆ.

 

ರಾಜ್ಯಸಭಾ ಚುನಾವಣೆಯಲ್ಲಿ ಜೆಡಿಎಸ್‌ ಅಭ್ಯರ್ಥಿ ಕುಪೇಂದ್ರ ರೆಡ್ಡಿಯವರನ್ನು ಬೆಂಬಲಿಸುವಂತೆ ಜೆಡಿಎಸ್‌ ಕೋರಿತ್ತು. ಆದ್ರೆ, ಸಿದ್ದರಾಮಯ್ಯ ಅವರು ನಾಮಪತ್ರ ಸಲ್ಲಿಸುವ ಕೊನೆಯ ದಿನ ತಂತ್ರಗಾರಿಕೆ ನಡೆಸಿ ಎರಡನೇ ಅಭ್ಯರ್ಥಿ ಕಣಕ್ಕಿಳಿಸಿದ್ದಾರೆ. ಹೀಗಾಗಿ, ಜೆಡಿಎಸ್‌ ತಮ್ಮ ಅಭ್ಯರ್ಥಿಯ ಗೆಲುವಿಗಾಗಿ ಸಂಧಾನ ತಂತ್ರಗಾರಿಕೆಗೆ ಮುಂದಾಗಿದೆ.

Share Post