Bengaluru

ಚಿತ್ರಕಲಾ ಪರಿಷತ್‌ನಲ್ಲಿ ಮೋಘೀಸ್ ಟೇಲ್ಸ್ ವನ್ಯಜೀವಿ ಛಾಯಾಚಿತ್ರ ಪ್ರದರ್ಶನ

ಬೆಂಗಳೂರು; ನಗರದ ಕರ್ನಾಟಕ ಚಿತ್ರಕಲಾ ಪರಿಷತ್‌ನಲ್ಲಿ ಯುವ ವನ್ಯಜೀವಿ ಛಾಯಾಗ್ರಾಹಕ ಮತ್ತು ಉತ್ಸಾಹಿಯಾಗಿರುವ ಅಮೋಘವರ್ಷ ಅವರ “ಮೋಘೀಸ್ ಟೇಲ್ಸ್” ವನ್ಯಜೀವಿ ಛಾಯಾಚಿತ್ರ ಪ್ರದರ್ಶನವನ್ನು ಏರ್ಪಡಿಸಲಾಗಿದೆ. ಇಂದು ಬೆಳಗ್ಗೆ ಈ ವನ್ಯಜೀವಿ ಛಾಯಾಚಿತ್ರ ಪ್ರದರ್ಶನವನ್ನು ಉದ್ಘಾಟಿಸಲಾಯಿತು.

ಕಾರ್ಯಕ್ರಮದಲ್ಲಿ ನ್ಯಾಷನಲ್‌ ಪಬ್ಲಿಕ್‌ ಸ್ಕೂಲ್‌ ಪ್ರಾಂಶುಪಾಲರಾದ ಮಾಲತಿ ಆರ್‌ ನಾರಾಯಣ್‌, ವಿಶ್ವವಾಣಿ ಸಂಪಾದಕ ವಿಶ್ವೇಶ್ವರ ಭಟ್‌, ಹೊಳೇಮತ್ತಿ ನೇಚರ್‌ ಫೌಂಡೇಷನ್‌ನ ಸಂಜಯ್‌ ಗುಬ್ಬಿ ಮುಂತಾದವರು ಭಾಗವಹಿಸಿದ್ದರು.

ಐಎಎಸ್‌ ಅಧಿಕಾರಿ ಹರ್ಷಾ ಅವರ ಪುತ್ರರಾಗಿರುವ ಅಮೋಘವರ್ಷ ಅವರಿಗೆ ಚಿಕ್ಕಂದಿನಿಂದಲೂ ವನ್ಯಜೀವಿಗಳ ಬಗ್ಗೆ ಆಸಕ್ತಿ. ವನ್ಯಜೀವಿಗಳನ್ನು ತಮ್ಮ ಕ್ಯಾಮೆರಾದಲ್ಲಿ ಸೆರೆ ಹಿಡಿಯುವುದು ಅವರ ಹವ್ಯಾಸ. ಅವರು ಕಾಡಿನಲ್ಲಿ ಸೆರೆ ಹಿಡಿದಿರುವ ವನ್ಯಜೀವಿಗಳ ಚಿತ್ರಗಳನ್ನು ಚಿತ್ರಕಲಾ ಪರಿಷತ್‌ನಲ್ಲಿ ಪ್ರದರ್ಶನಕ್ಕಿಡಲಾಗಿದೆ.

 

 

Share Post