Bengaluru

ಖಾಸಗಿ ಸಾರಿಗೆ ನೌಕರ ಮುಷ್ಕರ; ಬೀದಿಗಿಳಿಯಲಿಲ್ಲ ಎಲ್ಲೋ ಬೋರ್ಡ್‌ ವಾಹನಗಳು

ಬೆಂಗಳೂರು; ಖಾಸಗಿ ಸಾರಿಗೆ ಒಕ್ಕೂಟದಿಂದ ಮುಷ್ಕರ ನಡೆಯುತ್ತಿದೆ. ಯಾವುದೇ ಖಾಸಗಿ ಸಾರಿಗೆ ವಾಹನಗಳು ರಸ್ತೆಗೊಳಿದಿಲ್ಲ. ಹೀಗಾಗಿ, ಕ್ಯಾಬ್‌, ಆಟೋದಲ್ಲಿ ಓಡಾಡುವವರಿಗೆ ತೊಂದರೆಯಾಗಿದೆ. ಬೆಂಗಳೂರಿನಾದ್ಯಂತ ಬಹುತೇಕ ಈ ಮುಷ್ಕರ ಬೆಂಬಲ ಸಿಕ್ಕಿದೆ. ಕೆಲವೊಂದು ಕಡೆ ಆಟೋಗಳವರು ಮುಷ್ಕರ ಲೆಕ್ಕಿಸದೇ ಓಡಿಸುತ್ತಿದ್ದರು. ಈ ವೇಳೆ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದು, ಮೊಟ್ಟೆ ಎಸೆದಿದ್ದು ನಡೆದಿದೆ.

ಮಡಿವಾಳದಿಂದ ಫ್ರೀಡಂಪಾರ್ಕ್​ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಾಗುತ್ತಿದೆ. ಆಟೋ ಹಾಗೂ ಕ್ಯಾಬ್‌ ಚಾಲಕರ ಹಲವು ಸಂಘಟನೆಗಳು ಈ ಮುಷ್ಕರಕ್ಕೆ ಬೆಂಬಲ ಸೂಚಿಸಿವೆ. ಆನೆಕಲ್‌ನ  ಅತ್ತಿಬೆಲೆ ಗಡಿಭಾಗದಲ್ಲಿ ವಾಹನಗಳನ್ನ ತಡೆದು ವಾಪಸ್​​ ಕಳುಹಿಸಿದ ಘಟನೆಗಳು ನಡೆದಿವೆ. ಈ ವೇಳೆ ಗೊಂದಲದ ವಾತಾವರಣ ಉಂಟಾದಾಗ ಪೊಲೀಸರು ಮಧ್ಯೆ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ.

ಈ ವೇಳೆ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ಮಾತಿನಚಕಮಕಿ ಕೂಡಾ ನಡೆದಿದೆ.  ಮೆಜೆಸ್ಟಿಕ್‌ನ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದ ​ಪ್ರಿಪೇಯ್ಡ್​​ ಆಟೋ, ಕ್ಯಾಬ್ ಚಾಲಕರು ಕೂಡಾ ಮುಷ್ಕರಕ್ಕೆ ಬೆಂಬಲ ಸೂಚಿಸಿದ್ದಾರೆ. ಇದರಿಂದ ರೈಲಿನಲ್ಲಿ ಬಂದು ಖಾಸಗಿ ಸಾರಿಗೆ ಬಳಸುವ ಪ್ರಯಾಣಿಕರು ಪರದಾಡುತ್ತಿದ್ದಾರೆ. ಇನ್ನೊಂದೆಡೆ ರಸ್ತೆಗಿಳಿದ ಕ್ಯಾಬ್​ಗೆ ಚಾಲಕರಿಗೆ ಮೊಟ್ಟೆ ಎಸೆದ ಘಟನೆ ಹೆಬ್ಬಾಳದಲ್ಲಿ ನಡೆದಿದೆ.

 

Share Post