BengaluruCrime

ಮುರುಘಾ ಶ್ರೀ ವಿರುದ್ಧದ ಪೋಕ್ಸೋ ಕೇಸ್‌; ಕೋರ್ಟ್‌ ನಿಗಾದಲ್ಲಿ ತನಿಖೆಗೆ ಆಗ್ರಹ

ಬೆಂಗಳೂರು; ಚಿತ್ರದುರ್ಗದ ಮುರುಘಾ ಶ್ರೀಗಳ ವಿರುದ್ಧ ಪೋಕ್ಸೋ ಪ್ರಕರಣವನ್ನು ಕೋರ್ಟ್‌ ನಿಗಾದಲ್ಲಿ ವಿಚಾರಣೆ ನಡೆಸಬೇಕೆಂದು ಕೆಲ ವಕೀಲರು ಮನವಿ ಮಾಡಿದ್ದಾರೆ. ಈ ಸಂಬಂಧ ಅವರು ಹೈಕೋರ್ಟ್‌ ರಿಜಿಸ್ಟ್ರಾರ್‌ ಜನರಲ್‌ ಅವರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.

ಪ್ರಕರಣ ಸಂಬಂಧ ಶ್ರೀಗಳನ್ನು ಇದುವರೆಗೂ ವಿಚಾರಣೆ ನಡೆಸಿಲ್ಲ. ಮರುಘಾ ಮಠದ ಶ್ರೀಗಳು ಪ್ರಭಾವಿ ಸ್ವಾಮೀಜಿಗಳಾಗಿದ್ದಾರೆ. ತನಿಖೆಗೆ ದಿಕ್ಕು ತಪ್ಪಿಸುವ ಸಾಧ್ಯತೆಗಳು ಕೂಡಾ ಇರುತ್ತವೆ. ಇದರ ಜೊತೆಗೆ ಗೃಹ ಸಚಿವರು ಕೂಡಾ ಪ್ರಕರಣ ಸಂಬಂಧ ಪೂರ್ವಾಗ್ರಹ ಪೀಡಿಯ ಹೇಳಿಕೆ ನೀಡಿದ್ದಾರೆ. ಹೀಗಾಗಿ ಪ್ರಕರಣದ ತನಿಖೆ ಸರಿಯಾಗಿ ನಡೆಯಬೇಕೆಂದರೆ, ಕೋರ್ಟ್‌ ನಿಗಾದಲ್ಲಿ ತನಿಖೆ ನಡೆಯಬೇಕಾದ ಅವಶ್ಯಕತೆ ಇದೆ. ಹೀಗಾಗಿ ಕೋರ್ಟ್‌ ನಿಗಾದಲ್ಲಿ ತನಿಖೆ ನಡೆಸಬೇಕೆಂದು ಕೆಲ ವಕೀಲರು ಮನವಿ ಮಾಡಿಕೊಂಡಿದ್ದಾರೆ.

Share Post