Bengaluru

ನಾಳೆಯ ಬಂದ್‌ಗೆ ಓಲಾ, ಊಬರ್‌ ಚಾಲಕರ ಬೆಂಬಲವಿಲ್ಲ!

ಬೆಂಗಳೂರು; ಕಾವೇರಿ ವಿವಾದ ವಿಚಾರವಾಗಿ ನಾಳೆ ಕುರಬೂರು ಶಾಂತಕುಮಾರ್‌ ನೇತೃತ್ವದಲ್ಲಿ ಬೆಂಗಳೂರು ಬಂದ್‌ಗೆ ಕರೆ ನೀಡಲಾಗಿದೆ. ಇದಕ್ಕೆ 92ಕ್ಕೂ ಹೆಚ್ಚು ಸಂಘಟನೆಗಳು ಬೆಂಬಲ ನೀಡಿದ್ದವು. ಅದರಲ್ಲಿ ಓಲಾ, ಊಬರ್‌ ಚಾಲಕರೂ ಸೇರಿದ್ದರು. ಆದ್ರೆ ನಾಳೆ ಬಂದ್‌ಗೆ ಓಲಾ, ಊಬರ್‌ ಚಾಲಕರು ಬೆಂಬಲ ವಾಪಸ್‌ ಪಡೆದಿದ್ದಾರೆ.

ವಾಟಾಳ್‌ ನಾಗರಾಜ್‌ ನೇತೃತ್ವದಲ್ಲಿ ಇದೇ 29ರಂದು ಕರ್ನಾಟಕ ಬಂದ್‌ಗೆ ಕರೆ ನೀಡಲಾಗಿದೆ. ಹೀಗಾಗಿ 29ರ ಕರ್ನಾಟಕ ಬಂದ್‌ಗೆ ಓಲಾ, ಊಬರ್‌ ಚಾಲಕರ ಸಂಘಟನೆ ಬೆಂಬಲ ನೀಡಲಿದೆ. ಆದ್ರೆ ನಾಳೆಯ ಬಂದ್‌ಗೆ ಬೆಂಬಲವಿಲ್ಲ ಎಂದು ಸಂಘಟನೆ ಅಧ್ಯಕ್ಷ ತನ್ವೀರ್‌ ಪಾಷಾ ಹೇಳಿದ್ದಾರೆ.

 

Share Post