BengaluruCrime

ಬೆಂಗಳೂರು ಸೇರಿ 7 ರಾಜ್ಯಗಳಲ್ಲಿ NIA ದಾಳಿ; ತೀವ್ರ ತನಿಖೆ

ಬೆಂಗಳೂರು; ರಾಮೇಶ್ವರಂ ಕೆಫೆ ಬಾಂಬ್‌ ಸ್ಫೋಟ ಪ್ರಕರಣದ ತನಿಖೆಯನ್ನು ಎನ್‌ಐಎ ವಹಿಸಿಕೊಂಡಿದೆ. ಈ ನಡುವೆ ಹಲವು ತಿಂಗಳುಗಳಿಂದ ಎನ್‌ಐಎ ಬೆಂಗಳೂರು ಸೆರಿದಂತೆ ವಿವಿಧ ನಗರಗಳಲ್ಲಿ ಉಗ್ರ ಚಟುವಟಿಕೆ ಸಂಬಂಧ ತನಿಖೆ ನಡೆಸುತ್ತಿತ್ತು. ಇದೀಗ ಎನ್‌ಐಎ ತಂಡ ಕಾರ್ಯಪ್ರವೃತ್ತವಾಗಿದ್ದು, ಬೆಂಗಳೂರು ಸೇರಿ ಏಳು ನಗರಗಳಲ್ಲಿ ಶೋಧಕಾರ್ಯ ನಡೆಸಿದೆ.

ಇದನ್ನೂ ಓದಿ; ಕಡಬ ಆ್ಯಸಿಡ್ ದಾಳಿ; ಸೂಕ್ತ ಕ್ರಮಕ್ಕೆ ಲಕ್ಷ್ಮೀ ಹೆಬ್ಬಾಳಕರ್ ಸೂಚನೆ

ಜೈಲಿನಲ್ಲಿರುವ ಕೈದಿಗಳನ್ನು ಉಗ್ರ ಕೃತ್ಯಕ್ಕೆ ಬಳಕೆ;

ಜೈಲಿನಲ್ಲಿರುವ ಕೈದಿಗಳನ್ನು ಉಗ್ರ ಕೃತ್ಯಕ್ಕೆ ಬಳಕೆ; ಉಗ್ರ ಕೃತ್ಯಕ್ಕೆ ಜೈಲಿನಲ್ಲಿರುವ ಕೈದಿಗಳನ್ನು ಬಳಸಿಕೊಂಡ ಪ್ರಕರಣ ಸಂಬಂಧ ಎನ್‌ಐಎ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಈ ಸಂಬಂಧ ಎನ್‌ಐಎ ಅಧಿಕಾರಿಗಳು ಕಳೆದ ರಾತ್ರಿ ಪರಪ್ಪನ ಅಗ್ರಹಾರದಲ್ಲಿ ದಾಳಿ ನಡೆಸಿ ಶೋದ ಕಾರ್ಯ ನಡೆಸಿದ್ದಾರೆ. ಕಳೆದ ರಾತ್ರಿ 8 ಗಂಟೆಯಿಂದ ಬೆಳಗಿನ ಜಾವ 6 ಗಂಟೆಯವರೆಗೆ ಶೋಧ ನಡೆದಿದೆ.

ಶಂಕಿತ ಉಗ್ರನನ್ನು ಬಂಧಿಸಿದ್ದ ಅಧಿಕಾರಿಗಳು;

ಶಂಕಿತ ಉಗ್ರನನ್ನು ಬಂಧಿಸಿದ್ದ ಅಧಿಕಾರಿಗಳು; 2022ರ ಜುಲೈನಲ್ಲಿ ಕೇಂದ್ರ ಅಪರಾಧ ವಿಭಾಗ ಅಧಿಕಾರಿಗಳು ಶಂಕಿತ ಉಗ್ರ ಅಖ್ತರ್‌ ಹುಸೇನ್‌ ಎಂಬಾತನನ್ನು ಬಂಧಿಸಿದ್ದರು. ಈತನಿಗೆ ಲಷ್ಕರ್-ಎ-ತೊಯ್ಬಾ ಸಂಘಟನೆ ಜೊತೆ ನಂಟಿರುವ ಬಗ್ಗೆ ಸಾಕ್ಷ್ಯಗಳು ಸಿಕ್ಕಿದ್ದವು. ತಿಲಕ ನಗರದ ತಿಲಕ ನಗರದ ಬಹು ಮಹಡಿ ಕಟ್ಟಡದ ಮೂರನೇ ಮಹಡಿಯಲ್ಲಿರುವ ಫ್ಲ್ಯಾಟ್‌ನಲ್ಲಿ ಈತ ವಾಸವಿದ್ದು, ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಆತನನ್ನು ಬಂಧಿಸಲಾಗಿತ್ತು.

ಕಳೆದ ವರ್ಷ ಐವರು ಶಂಕಿತರ ಬಂಧನ;

ಕಳೆದ ವರ್ಷ ಐವರು ಶಂಕಿತರ ಬಂಧನ; ಕಳೆದ ವರ್ಷ ಕೂಡಾ ಐವರು ಶಂಕಿತರನ್ನು ಬಂಧಿಸಲಾಗಿತ್ತು. ಸಿಸಿಬಿ ಅಧಿಕಾರಿಗಳು 2023ರ ಜುಲೈ 18ರಂದು ಆರ್‌ಟಿ ನಗರದ ಸುಲ್ತಾನ್ ಪಾಳ್ಯದಲ್ಲಿರುವ ಮನೆಯೊಂದರ ಮೇಲೆ ದಾಳಿ ನಡೆಸಿದ್ದರು. ಅಲ್ಲಿದ್ದ ಐದು ಮಂದಿ ಶಂಕಿತ ಉಗ್ರರನ್ನು ಬಂಧಿಸಿದ್ದರು. ಇವರು ಬೆಂಗಳೂರಿನಲ್ಲಿ ದೊಡ್ಡ ಭಯೋತ್ಪಾದಕ ಸಂಚು ರೂಪಿಸಿದ್ದರು ಎನ್ನಲಾಗಿದೆ. ಈ ವೇಳೆ ಒಬ್ಬನ ಮನೆಯಲ್ಲಿ ನಾಲ್ಕು ಜೀವಂತ ಗ್ರೆನೇಡ್‌ಗಳು,  7 ನಾಡ ಬಂದೂಕುಗಳು ಮತ್ತು 45 ಸುತ್ತು ಜೀವಂತ ಮದ್ದುಗುಂಡುಗಳು ಪತ್ತೆಯಾಗಿದ್ದವು.

ಇದನ್ನೂ ಓದಿ; ಲೋಕಸಭಾ ಚುನಾವಣೆ; ರಾಜ್ಯದ 28 ಕ್ಷೇತ್ರಗಳಿಗೆ ಬಿಜೆಪಿ ಸಂಭಾವ್ಯರ ಪಟ್ಟಿ ಸಿದ್ಧ; ಇವರೇನಾ ಅಭ್ಯರ್ಥಿಗಳು..?

ಉಗ್ರ ಕೃತ್ಯಕ್ಕೆ ಸಹ ಕೈದಿಗಳ ಬಳಕೆ;

ಉಗ್ರ ಕೃತ್ಯಕ್ಕೆ ಸಹ ಕೈದಿಗಳ ಬಳಕೆ; 2017ರಲ್ಲಿ ಉದ್ಯಮಿಯೊಬ್ಬರ ಕೊಲೆ ಪ್ರಕರಣದಲ್ಲಿ ಶಂಕಿತ ಉಗ್ರ ಜುನೈದ್​ ಮತ್ತು ಆತನ ಐವರು ಸಹಚರರನ್ನು ಬಂಧಿಸಲಾಗಿತ್ತು. ಪರಪ್ಪನ ಅಗ್ರಹಾರ ಜೈಲಿನಲ್ಲಿ ಇವರನ್ನು ಇರಿಸಲಾಗಿತ್ತು. ಇದೇ ವೇಳೆ 2008ರ ಬೆಂಗಳೂರು ಸರಣಿ ಸ್ಫೋಟದ ಆರೋಪಿ ಟಿ.ನಜೀರ್ ಎಂಬಾತ, ಜುನೈದ್ ಅಹಮದ್ ನ ಸಂಪರ್ಕಕ್ಕೆ ಬಂದಿದ್ದ. ಅದಾದ ನಂತರ ಜುನೈದ್ ತನ್ನ ಐವರು ಸಹಚರರನ್ನು ಉಗ್ರ ಚಟುವಟಿಕೆಗೆ ಪ್ರೇರೇಪಿಸಿದ್ದ ಎಂದು ತಿಳಿದುಬಂದಿದೆ.

ಜೈಲಿನಿಂದ ಹೊರಬಂದ ಮೇಲೆ ಸ್ಫೋಟಕ್ಕೆ ಸಂಚು;

ಜೈಲಿನಿಂದ ಹೊರಬಂದ ಮೇಲೆ ಸ್ಫೋಟಕ್ಕೆ ಸಂಚು; ಕೊಲೆ ಆರೋಪದ ಮೇಲೆ ಜೈಲು ಸೇರಿದ್ದವರು ಬೇಲ್‌ ಪಡೆದು ಹೊರಬಂದಿದ್ದರು. ಅನಂತರ ಐವರೂ ಜುನೈದ್ ನಜೀರ್ ಸೂಚನೆಯಂತೆ ಉಗ್ರ ಚಟುವಟಿಕೆ ಆರಂಭಿಸಿದ್ದರು. ಇನ್ನು ಇದೇ ಜುನೈದ್‌ ನಜೀರ್‌, ಲವರ ಮೂಲಕ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ಈ ಐವರು ಸಹಚರರಿಗೆ ಪೂರೈಕೆ ಮಾಡಿದ್ದ. ಇದೀಗ ಜುನೈದ್‌ ವಿದೇಶದಲ್ಲಿ ತಲೆಮರೆಸಿಕೊಂಡಿದ್ದಾರೆ. ಐವರು ಸಹಚರರು ಈಗ ಜೈಲಿನಲ್ಲಿದ್ದಾರೆ. ಸಿಸಿಬಿ ತನಿಖೆ ನಡೆಸುತ್ತಿದ್ದ ಈ ಪ್ರಕರಣವನ್ನು ಕೂಡಾ ಎನ್‌ಐಎ ಹಸ್ತಾಂತರ ಮಾಡಲಾಗಿದೆ.

ಇದನ್ನೂ ಓದಿ; ಪಾಕ್‌ ಪರ ಘೋಷಣೆ ಕೂಗಿದ ಆರೋಪ ಪ್ರಕರಣ; ಜೋರಾಯ್ತು ಕಾಂಗ್ರೆಸ್‌-ಬಿಜೆಪಿ ಜಟಾಪಟಿ

 

Share Post