BengaluruPolitics

ಮುನಿರತ್ನ ಎಲ್ಲವನ್ನೂ ವ್ಯಾಪಾರ ದೃಷ್ಟಿಯಲ್ಲಿ ನೋಡ್ತಾರೆ; ಡಿ.ಕೆ.ಸುರೇಶ್‌

ಬೆಂಗಳೂರು; ಸಚಿವ ಹಾಗೂ ನಿರ್ಮಾಪಕ ಮುನಿರತ್ನ ಅವರು ಎಲ್ಲವನ್ನೂ ವ್ಯಾಪಾರಿ ದೃಷ್ಟಿಕೋನದಲ್ಲೇ ನೋಡುತ್ತಾರೆ ಎಂದು ಸಂಸದ ಡಿ.ಕೆ.ಸುರೇಶ್‌ ಕಿಡಿಕಾರಿದ್ದಾರೆ. ಮುನಿರತ್ನ ಅವರು ಉರಿಗೌಡ ಹಾಗೂ ನಂಜೇಗೌಡ ಸಿನಿಮಾ ಮಾಡುವುದಿಲ್ಲ ಎಂದು ಹೇಳಿದ ಮೇಲೆ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಮುನಿರತ್ನ ಅವರು ಒಕ್ಕಲಿಗರನ್ನು ವ್ಯಾಪಾರಕ್ಕಾಗಿ ಬಳಸಿಕೊಳ್ಳಲು ಪ್ರಯತ್ನಿಸಿದ್ದರು. ಒಕ್ಕಲಿಗರು ಇವರಿಗೆ ತಕ್ಕ ಪಾಠವನ್ನು ಕಲಿಸಲಿದ್ದಾರೆ ಎಂದರು.

ಮುನಿರತ್ನ ಅವರನ್ನು ನಿರ್ಮಲಾನಂದ ಶ್ರೀಗಳು ಯಾಕೆ ಕರೆಸಿ ಮಾತನಾಡಿದರೋ ಗೊತ್ತಿಲ್ಲ. ಆದ್ರೆ ಇವರು ವ್ಯಾಪಾರಸ್ಥರು, ವ್ಯಾಪಾರ ಇವರ ಉದ್ದೇಶ. ಇವರು ಯಾವತ್ತೂ ಸಮಾಜಸೇವೆ ಗುರಿಯಾಗಿಸಿಕೊಂಡು ಕೆಲಸ ಮಾಡೋದಿಲ್ಲ. ಎಲ್ಲವನ್ನೂ ವ್ಯಾಪಾರ ದೃಷ್ಟಿಯಲ್ಲೇ ನೋಡುತ್ತಾರೆ ಎಂದರು. ಇನ್ನು ಸಿನಿಮಾಗೆ ಅಶ್ವತ್ಥನಾರಾಯಣ್‌ ಅವರು ಕಥೆ ಬರೆಯುತ್ತಿದ್ದಾರೆ ಎಂಬ ವಿಚಾರದ ಬಗ್ಗೆ ಮಾತನಾಡಿದ ಡಿ.ಕೆ.ಸುರೇಶ್‌, ಇವರು ಅಸ್ವಸ್ಥರಾಗಿದ್ದಾಗ ಸಿನಿಮಾ ಕನಸಿಗೆ ಬಂದಿದೆ ಎಂದು ಲೇವಡಿ ಮಾಡಿದ್ದಾರೆ.

Share Post