BengaluruCrime

ಮಠ ಚಿತ್ರದ ನಿರ್ದೇಶಕ ಗುರುಪ್ರಸಾದ್‌ ಅರೆಸ್ಟ್‌

ಬೆಂಗಳೂರು; ಚೆಕ್‌ ಬೌನ್ಸ್‌ ಪ್ರಕರಣದಲ್ಲಿ ನಟ, ನಿರ್ದೇಶಕ ಗುರುಪ್ರಸಾದ್‌ ಅವರನ್ನು ಬಂಧಿಸಲಾಗಿದೆ. ಗಿರಿನಗರ ಪೊಲೀಸರು ಮಠ ಗುರು ಪ್ರಸಾದ್‌ ಅವರನ್ನು ಬಂಧಿಸಿದ್ದಾರೆ. ಚೆಕ್‌ ಬೌನ್ಸ್‌ ಹಿನ್ನೆಲೆಯಲ್ಲಿ ಕೋರ್ಟ್‌ ಗುರುಪ್ರಸಾದ್‌ ವಿರುದ್ಧ ಅರೆಸ್ಟ್‌ ವಾರೆಂಟ್‌ ಹೊರಡಿಸಿತ್ತು. ಈ ಹಿನ್ನೆಲೆಯಲ್ಲಿ ಅವರನ್ನು ಬಂಧಿಸಲಾಗಿದೆ.

ಶ್ರೀನಿವಾಸ್ ಹೆಸರಿನ ವ್ಯಕ್ತಿಗೆ ಗುರು ಪ್ರಸಾದ್‌ ಹಣ ಕೊಡಬೇಕಿತ್ತಂತೆ. ಇದಕ್ಕಾಗಿ ಗುರುಪ್ರಸಾದ್‌ ಚೆಕ್‌ ನೀಡಿದ್ದು ಅದು ಬೌನ್ಸ್‌ ಆಗಿತ್ತು. ವಂಚನೆ ಹಾಗೂ ಮೋಸ ಮಾಡಿದ್ದಾರೆಂದು ಶ್ರೀನಿವಾಸ್‌ ಕೋರ್ಟ್‌ ಮೆಟ್ಟಿಲೇರಿದ್ದರು. ಗುರು ಪ್ರಸಾದ್‌ ಅವರು, ಮಠ, ಎದ್ದೇಳು ಮಂಜುನಾಥ, ಡೈರೆಕ್ಟರ್‌ ಸ್ಪೆಷಲ್‌ ಸೇರಿದಂತೆ ಹಿಟ್‌ ಮೂವಿಗಳನ್ನು ನಿರ್ದೇಶಿಸಿದ್ದಾರೆ.

Share Post