BengaluruPolitics

ರಿಲ್ಯಾಕ್ಸ್‌ ಮೂಡ್‌ನಲ್ಲಿ ಕೆಪಿಸಿಸಿ ಅಧ್ಯಕ್ಷ; ಇಡ್ಲಿ ತಿಂದು ತಾಯಿಯ ಆಶೀರ್ವಾದ ಪಡೆದ ಡಿಕೆಶಿ

ರಾಮನಗರ; ಕಳೆದ ಕೆಲ ತಿಂಗಳಿಂದ ಬಿಡುವಿಲ್ಲದೆ ರಾಜ್ಯದಲ್ಲಿ ಸುತ್ತಾಟ ನಡೆಸಿದ್ದ ರಾಜಕೀಯ ನಾಯಕರು ಈಗ ಕೊಂಚ ರಿಲ್ಯಾಕ್ಸ್‌ ಆಗಿದ್ದಾರೆ. ಎಲ್ಲರೂ ವಿಶ್ರಾಂತಿಗೆ ಜಾರುತ್ತಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ನಿನ್ನೆಯೇ ಮತದಾನ ಮಾಡಿದ ಮೇಲೆ ಕೊಂಚ ರಿಲ್ಯಾಕ್ಸ್‌ ಆಗಿ ಕಂಡರು. ಆಟೋ ಓಡಿಸಿ ಖುಷಿಪಟ್ಟರು. ಇಂದು ಬೆಳಗ್ಗೆ ಅವರು ಮತ್ತಷ್ಟು ರಿಲ್ಯಾಕ್ಸ್‌ ಮೂಡ್‌ನಲ್ಲಿದ್ದಂತೆ ಕಂಡುಬಂದರು.

ಕನಕಪುರದಲ್ಲೇ ಉಳಿದಿರುವ ಡಿ.ಕೆ.ಶಿವಕುಮಾರ್‌, ಇಂದು ಬೆಳಗ್ಗೆ ಕೆಎನ್‌ಎಸ್‌ ವೃತ್ತದ ವಾಸು ಹೋಟೆಲ್‌ಗೆ ಭೇಟಿ ನೀಡಿದ್ದರು. ಅಲ್ಲಿ ಅವರು ಇಡ್ಲಿ, ವಡೆ ಸೇವಿಸಿದರು. ಇದೇ ವೇಳೆ ಡಿ.ಕೆ.ಸುರೇಶ್‌ ಕೂಡಾ ಅವರ ಜೊತೆ ತಿಂಡಿ ತಿಂದರು.

ಅನಂತರ ಅಣ್ಣ-ತಮ್ಮಂದಿರಿಬ್ಬರೂ ಕನಕಪುರದ ಕೋಡಿಹಳ್ಳಿಯ ನಿವಾಸಕ್ಕೆ ತೆರಳಿದರು. ಅಲ್ಲಿ ತಾಯಿ ಗೌರಮ್ಮನವರನ್ನು ಭೇಟಿಯಾದ ಡಿ.ಕೆ.ಶಿವಕುಮಾರ್‌ ಹಾಗೂ ಡಿ.ಕೆ.ಸುರೇಶ್‌ ಅವರ ಅಶೀರ್ವಾದ ಪಡೆದರು. ತಾಯಿಯ ಕಾಲಿಗೆ ನಮಸ್ಕರಿಸಿ ಡಿ.ಕೆ.ಶಿವಕುಮಾರ್‌ ಆಶಿರ್ವಾದ ಪಡೆದುಕೊಂಡರು.

ಇನ್ನು ತಾಯಿಯ ಜೊತೆ ಮಾತನಾಡುತ್ತಿರುವಾಗ ಡಿ.ಕೆ.ಶಿವಕುಮಾರ್‌ ನೀರು ಕೇಳಿ ಮಾತ್ರ ನುಂಗಿದರು. ಈ ವೇಳೆ ಗೌರಮ್ಮ ಅವರು ಯಾಕೆ ಮಗ ಹುಷಾರಿಲ್ಲವೇ..? ತುಂಬಾ ಸುತ್ತಾಡಿದ್ದೀಯಾ ಸುಸ್ತಾಗಿದೆ ಅನಿಸುತ್ತೆ ಎಂದು ಹೇಳಿದರು.

 

Share Post