BengaluruHealth

ಕುಳಿತಲ್ಲೇ ಪ್ರಾಣ ಬಿಟ್ಟ ಗಾರೆ ಕೆಲಸಗಾರ; ಮಾರನೆ ದಿನದವರೆಗೂ ಗೊತ್ತಾಗಲೇ ಇಲ್ಲ!

ಬೆಂಗಳೂರು; ಗಾರೆ ಕೆಲಸ ಮಾಡುತ್ತಾ ಜೀವನ ಸಾಗಿಸುತ್ತಿದ್ದ ಕಾರ್ಮಿಕನೊಬ್ಬ ಸುಸ್ತಾಗಿ ಇಂದಿರಾ ಕ್ಯಾಂಟೀನ್‌ಗೆ ಬಂದಿದ್ದಾನೆ.. ಅಲ್ಲಿ ಊಟ ತಿಂದು ಪಕ್ಕದ ಶೆಡ್‌ ಒಂದರ ಬಳಿ ಕುಳಿತಿದ್ದಾನೆ.. ಕುಳಿತಿದ್ದಂತೆಯೇ ಆತನ ಪ್ರಾಣ ಹೋಗಿದೆ.. ಆದ್ರೆ ಒಂದು ದಿನವಾದರೂ ಆತ ಸತ್ತಿದ್ದಾನೆ ಅನ್ನೋದು ಯಾರಿಗೂ ಗೊತ್ತಾಗಿಲ್ಲ. ಒಂದು ದಿನದ ನಂತರವೂ ವ್ಯಕ್ತಿ ಕುಳಿತಲ್ಲೇ ಕುಳಿತಿರುವುದನ್ನು ಕಂಡ ಜನ ಪರೀಕ್ಷೆ ಮಾಡಿದಾಗಿ ಆತ ಸತ್ತಿರುವುದು ಗೊತ್ತಾಗಿದೆ.. ಬೆಂಗಳೂರಿನ ಬಾಗಲಗುಂಟೆಯ ಇಂದಿರಾ ಕ್ಯಾಂಟೀನ್‌ ಬಳಿ ಈ ಘಟನೆ ನಡೆದಿದೆ..

ಇದನ್ನೂ ಓದಿ; ತಾನೇ ಬಟ್ಟೆ ಹರಿದುಕೊಂಡು ಯುವಕನ ಮೇಲೆ ಆರೋಪ ಮಾಡಿದ ಮಹಿಳೆ!

ಮೃತ ವ್ಯಕ್ತಿಯನ್ನು ಶಿವಲಿಂಗಯ್ಯ ಎಂದು ಗುರುತಿಸಲಾಗಿದ್ದು, ಶಿವಲಿಂಗಯ್ಯ ರಾಮನಗರ ಮೂಲದವರಾಗಿದ್ದು, ಗಾರೆ ಕೆಲಸ ಅರಸಿ ಬೆಂಗಳೂರಿಗೆ ಬಂದಿದ್ದರು ಎಂದು ತಿಳಿದುಬಂದಿದೆ.. ಇಲ್ಲಿಯೇ ವಾಸವಿದ್ದ ಶಿವಲಿಂಗಯ್ಯ ಗಾರೆ ಕೆಲಸ ಮುಗಿಸಿ ಇಂದಿರಾ ಕ್ಯಾಂಟೀನ್‌ನಲ್ಲಿ ಊಟಕ್ಕೆ ಬಂದಿದ್ದರು.. ಇದೇ ವೇಳೆ ಶೆಡ್‌ ಪಕ್ಕ ಕೂತಿದ್ದಾಗ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ.. ಕೆಲಸದ ವೇಳೆಯೇ ಸುಸ್ತಾಗುತ್ತಿದೆ ಎಂದು ಹೇಳಿದ್ದರು ಎಂದು ಸಹ ಕೆಲಸಗಾರರು ಹೇಳಿದ್ದಾರೆ.. ಅವರ ದಾಖಲೆಗಳನ್ನು ಪರೀಕ್ಷೆ ಮಾಡಿದಾಗ ಶಿವಲಿಂಗಯ್ಯ ರಾಮನಗರದವರು ಎಂದು ಗೊತ್ತಾಗಿದೆ..

ಇದನ್ನೂ ಓದಿ; ನೀವು ಚಿಕನ್‌ ಲಿವರ್‌ ಪ್ರಿಯರಾ..?; ಹಾಗಾದ್ರೆ ಈ ವರದಿ ಓದಲೇಬೇಕು..

Share Post