Bengaluru

ಮೌಲ್ಯಾಧಾರಿತ ಶಿಕ್ಷಣದಿಂದ ಸಮಾಜ ಕಟ್ಟಲು ಸಾಧ್ಯ; ಸಚಿವ ಬಿ.ಸಿ.ನಾಗೇಶ್‌

ಬೆಂಗಳೂರು; ಸಮಾಜದಲ್ಲಿ ಮೌಲ್ಯಗಳು ಕುಸಿಯುತ್ತಿವೆ. ಹೀಗಾಗಿ ಶಿಕ್ಷಣ ಮೌಲ್ಯಾಧಾರಿತವಾಗಿದ್ದರೆ ಉತ್ತಮ ಪ್ರಜೆಗಳನ್ನು ರೂಪಿಸಲು ಸಹಾಯಕವಾಗುತ್ತದೆ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ ಹೇಳಿದ್ದಾರೆ. ಬೆಂಗಳೂರಿನಲ್ಲಿ ನಡೆಯುತ್ತಿರುವ ಶಾಲಾ ಶಿಕ್ಷಣದಲ್ಲಿ ಮೌಲ್ಯ ಶಿಕ್ಷಣ ಅನುಷ್ಠಾನ ದುಂಡು ಮೇಜಿನ ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡಿದರು.

ಸಮಾಜದಲ್ಲಿ ಈಗ ಅನಾಚಾರಗಳೇ ಹೆಚ್ಚಾಗುತ್ತಿವೆ. ಮೌಲ್ಯಯುತ ಜೀವನ ನಡೆಸುವವರು ಕಡಿಮೆ ಇದ್ದಾರೆ. ಹೀಗಾಗಿ, ಶಿಕ್ಷಣದಲ್ಲಿ ಮೌಲ್ಯಾಧಾರಿತ ಶಿಕ್ಷಣ ತರಬೇಕು. ಆಗ ಮಾತ್ರ ಮಕ್ಕಳು ಒಳ್ಳೆಯ ಬುದ್ಧಿ ಕಲಿಯಲಿದ್ದಾರೆ. ಹೀಗಾಗಿ ಶಾಲಾ ಪಠ್ಯದಲ್ಲಿ ಮೌಲ್ಯಾಧಾರಿತ ವಿಷಯಗಳನ್ನು ಅಳವಡಿಸುವ ಬಗ್ಗೆ ಚಿಂತನೆ ನಡೆಸಲು ಈ ಸಭೆ ನಡೆಸುತ್ತಿದ್ದೇವೆ ಎಂದು ಸಚಿವರು ಹೇಳಿದರು.

Share Post