BengaluruLifestyle

ಈ ಶಿವಲಿಂಗಕ್ಕೆ ಬೆಣ್ಣೆ ಹಚ್ಚಿದರೆ ತುಪ್ಪವಾಗಿ ಬದಲಾಗುತ್ತದೆ..!

ಬೆಂಗಳೂರು; ಶಿವನನ್ನು ಆರಾಧಿಸದವರೇ ಇಲ್ಲ. ಆಸ್ತಿಕರೆಲ್ಲಾ ಶಿವನ ಆರಾಧಕರೇ. ಈ ಶಿವನ ಪವಾಡಗಳಿಗೆ ಭಕ್ತರಿಗೆ ಅಚ್ಚರಿಯಾಗುತ್ತಲೇ ಇರುತ್ತದೆ. ಅದೇ ರೀತಿ ಶಿವಗಂಗೆ ಬೆಟ್ಟದಲ್ಲಿರುವ ಶಿವನ ದೇಗುಲದಲ್ಲೂ ದಿನವೂ ಒಂದು ಪವಾಡ ನಡೆಯುತ್ತದೆ. ಇಲ್ಲಿ ಶಿವಲಿಂಗಕ್ಕೆ ಬೆಣ್ಣೆ  ಸವರಿದರೆ ಅದು ತುಪ್ಪವಾಗಿ ಬದಲಾಗುತ್ತದೆ. 

ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕಿನ ಡಾಬಸ್‌ಪೇಟೆ ಬಳಿ ಶಿವಗಂಗೆ ಬೆಟ್ಟ ಬರುತ್ತದೆ. ಡಾಬಸ್‌ಪೇಟೆಯಿಂದ ಎಡಕ್ಕೆ ಆರು ಕಿಲೋಮೀಟರ್‌ ಹೋದರೆ ಶಿವಗಂಗೆ ಬೆಟ್ಟ ಸಿಗುತ್ತದೆ. ಇದನ್ನು ದಕ್ಷಿಣ ಕಾಶಿ ಎಂದೇ ಕರೆಯಲಾಗುತ್ತದೆ. ಈ ಬೆಟ್ಟದ ಮೇಲಿರುವ ಗಂಗಾಧರೇಶ್ವರ ದೇವಾಲಯವಿದ್ದು,  ಇಲ್ಲಿನ ಶಿವಲಿಂಗಕ್ಕೆ ಬೆಣ್ಣೆ ಹಚ್ಚಿದರೆ ಕ್ಷಣಾರ್ಧದಲ್ಲಿ ತುಪ್ಪವಾಗಿ ಬದಲಾಗುತ್ತದೆ.

ದೇವರ ಈ ಪವಾಡವನ್ನು ನೋಡಲೆಂದೇ ಸಾವಿರಾರು ಭಕ್ತರು ಇಲ್ಲಿಗೆ ಬರುತ್ತಾರೆ.

 

Share Post