BengaluruPolitics

ಕೇಂದ್ರಕ್ಕೆ ನಾವು ಕೊಡ್ತಿರುವ ತೆರಿಗೆ ಎಷ್ಟು..? ; ಅಲ್ಲಿಂದ ನಮಗೆ ಬರ್ತಿರೋದೆಷ್ಟು..?; ಸಿದ್ದರಾಮಯ್ಯ

ಬೆಂಗಳೂರು; ಕೇಂದ್ರ ಸರ್ಕಾರದವರು ನಮ್ಮ ರಾಜ್ಯಕ್ಕೆ ಬರಬೇಕಿರುವ ತೆರಿಗೆ ಹಣವನ್ನು ಕೊಡದೆ ವಂಚಿಸುತ್ತಿದ್ದಾರೆ ಎಂದು ನೂತನ ಸಿಎಂ ಸಿದ್ದರಾಮಯ್ಯ ಆರೋಪ ಮಾಡಿದ್ದಾರೆ. ಮೊದಲ ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿದ ಅವರು, ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಸಿದ್ದರಾಮಯ್ಯ ಹೇಳಿದ್ದೇನು..?

ನಾವು ರಾಜ್ಯದಿಂದ ಪ್ರತಿ ವರ್ಷ ಸುಮಾರು 4 ಲಕ್ಷ ಕೋಟಿ ರೂಪಾಯಿ ತೆರಿಗೆ ಸಂಗ್ರಹಿಸಿ ಕೇಂದ್ರಕ್ಕೆ ಕೊಡುತ್ತೇವೆ

ಅದರಲ್ಲಿ ಕೇಂದ್ರ ಸರ್ಕಾರದವರು ನಮಗೆ ಕೊಡುತ್ತಿರೋದು ಕೇವಲ ಐವತ್ತು ಸಾವಿರ ಕೋಟಿ ರೂಪಾಯಿ

ನಿಯಮದ ಪ್ರಕಾರ ನಮಗೆ ಕೇಂದ್ರ ಸರ್ಕಾರ  ವರ್ಷಕ್ಕೆ 1 ಲಕ್ಷ ಕೋಟಿ ರೂಪಾಯಿಗೂ ಹೆಚ್ಚು ಹಣ ಕೊಡಬೇಕು

ಆದ್ರೆ, ಕೇಂದ್ರದವರು 27 ಸಾವಿರ ಕೋಟಿ ರೂ ತೆರಿಗೆ ಪಾಲು, 13 ಸಾವಿರ ಕೋಟಿ ರೂ. ಕೇಂದ್ರದ ಸಹಾಯಧನ ಎಂದು ಕೊಡುತ್ತಿದ್ದಾರೆ

ಈ ವರ್ಷ ವಿಶೇಷ ಅನುದಾನದಡಿಯಲ್ಲಿ ನಮ್ಮ ರಾಜ್ಯಕ್ಕೆ 5495 ಕೋಟಿ ರೂಪಾಯಿ ನೀಡಬೇಕೆಂದು 15ನೇ ಪೈನಾನ್ಸ್‌ ಕಮೀಷನ್‌ ರೆಕಮೆಂಡ್‌ ಮಾಡಿತ್ತು

ನಮ್ಮ ಸಿಎಂ ಬೊಮ್ಮಾಯಿಯವರು ಸಮರ್ಥವಾಗಿ ವಾದ ಮಾಡಿ ಈ ಹಣ ಪಡೆದುಕೊಲ್ಳಬೇಕಿತ್ತು

ಆದ್ರೆ ಸಿಎಂ ಬೊಮ್ಮಾಯಿಯವರು ಸರಿಯಾಗಿ ಬೇಡಿಕೆ ಇಡದ ಕಾರಣ ಆ ಹಣ ಕೇಂದ್ರದಲ್ಲೇ ಉಳಿಯಿತು

 

Share Post