BengaluruCrime

ಪತ್ನಿ ಜೊತೆ ಹೆಚ್ಚು ಮಾತಾಡುತ್ತಿದ್ದುದನ್ನು ಪ್ರಶ್ನಿಸಿದ್ದಕ್ಕೇ ಕೊಲೆ ಮಾಡಿಬಿಟ್ಟ

ಬೆಂಗಳೂರು; ಚಿಕ್ಕಪ್ಪನ ಮಗ ತನ್ನ ಪತ್ನಿ ಜೊತೆ ಫೋನ್‌ನಲ್ಲಿ ಹೆಚ್ಚಾಗಿ ಮಾತನಾಡುತ್ತಿದ್ದ. ಇದರಿಂದ ಅಸಮಾಧಾನಗೊಂಡ ವ್ಯಕ್ತಿ ಆತನನ್ನು ಪ್ರಶ್ನೆ ಮಾಡಿದ್ದಾನೆ. ಇದಕ್ಕೇ ಆಕ್ರೋಶಗೊಂಡು ಚಿಕ್ಕಪ್ಪನ ಮಗ ಕೊಲೆ ಮಾಡಿಬಿಟ್ಟಿದ್ದಾನೆ. ಬಿಹಾರ ಮೂಲದ ಇಬ್ಬರು ದಾಯಾದಿಗಳ ಕಲಹ ಕೊಲೆಯಲ್ಲಿ ಅಂತ್ಯವಾಗಿದೆ. 

ಬೆಂಗಳೂರಿನ ಚಿಕ್ಕಜಾಲದಲ್ಲಿ ಈ ಕೃತ್ಯ ಎಸಗಲಾಗಿದೆ. ಸಂದೀಪ್‌ ಕುಮಾರ್‌ ಎಂಬಾತನೇ ಕೊಲೆಯಾದ ದುರ್ದೈವಿಯಾಗಿದ್ದಾನೆ. ಸಂದೀಪ್‌ ಕುಮಾರ್‌ ಅವರ ಪತ್ನಿ ಜೊತೆ ಸಂದೀಪ್‌ ಚಿಕ್ಕಪ್ಪನ ಮಗ ಶುಬೋದ್‌ ಮಂಡಲ್‌ ಹೆಚ್ಚಾಗಿ ಫೋನ್‌ನಲ್ಲಿ ಮಾತನಾಡುತ್ತಿದ್ದನಂತೆ. ಇದರಿಂದಾಗಿ ಸಂದೀಪ್‌ ಬುದ್ಧಿ ಹೇಳಿದ್ದಾನೆ. ಅದಕ್ಕೇ ಆಕ್ರೋಶಗೊಂಡು ಶುಬೋದ್‌ ಮಂಡಲ್‌, ಸಂದೀಪ್‌ನನ್ನು ಕೊಲೆ ಮಾಡಿದ್ದಾನೆ.

ಇಬ್ಬರೂ ಬಿಹಾರದವರಾಗಿದ್ದು, ಕೂಲಿ ಕೆಲಸಕ್ಕಾಗಿ ಬೆಂಗಳೂರಿಗೆ ಬಂದಿದ್ದರು. ಚಿಕ್ಕಜಾಲದಲ್ಲಿ ಸಂದೀಪ್‌ ರೂಂ ಮಾಡಿಕೊಂಡಿದ್ದರು. ಹಲವು ಸ್ನೇಹಿತರು ಕೂಡಾ ಜೊತೆಗಿದ್ದರು. ಆರೋಪಿ ಶುಬೋದ್‌ ಕೂಡಾ ಮೂರು ತಿಂಗಳ ಹಿಂದೆ ಬೆಂಗಳೂರಿಗೆ ಬಂದಿದ್ದ. ಸಂದೀಪ್‌ ಜೊತೆಗೇ ವಾಸವಿದ್ದ. ಈ ವೇಳೆ ಆತ ಬಿಹಾರದಲ್ಲಿರುವ ಸಂದೀಪ್‌ ಪತ್ನಿ ಜೊತೆ ಯಾವಾಗಲೂ ಸಲುಗೆಯಿಂದ ಫೋನ್‌ನಲ್ಲಿ ಮಾತನಾಡುತ್ತಿದ್ದನಂತೆ. ಇದ್ರಿಂದ ಇಬ್ಬರ ನಡುವೆ ಅಕ್ರಮ ಸಂಬಂಧ ಹೊಂದಿರುವ ಬಗ್ಗೆ ಸಂದೀಪ್‌ಗೆ ಶಂಕೆ ವ್ಯಕ್ತವಾಗಿತ್ತು.

 

Share Post