BengaluruPolitics

ಮಾರ್ಚ್‌ 30ರ ನಂತರ ಎರಡನೇ ಪಟ್ಟಿ ರಿಲೀಸ್‌; ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌

ಬೆಂಗಳೂರು; ಮಾರ್ಚ್‌ 30ರ ನಂತರ ಕಾಂಗ್ರೆಸ್‌ ಎರಡನೇ ಪಟ್ಟಿ ಬಿಡುಗಡೆಯಾಗಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ನಮ್ಮ ಪಕ್ಷದಲ್ಲಿ ಯಾವುದೇ ಗೊಂದಲವಿಲ್ಲ. ಮೊದಲ ಪಟ್ಟಿ ರಿಲೀಸ್‌ ಆಯ್ತು ಯಾವುದೇ ಗೊಂದಲ ಆಗಲಿಲ್ಲ. ಮುಂದೆ ಕೂಡಾ ಗೊಂದಲವಿಲ್ಲದಂತೆ ನೋಡಿಕೊಳ್ಳುತ್ತೇನೆ ಎಂದು ಹೇಳಿದರು.

ಕೆಲ ಕ್ಷೇತ್ರಗಳಲ್ಲಿ ಮೂರು ನಾಲ್ಕು ಮಂದಿ ಆಕಾಂಕ್ಷಿಗಳಿದ್ದಾರೆ ನಿಜ. ಆದ್ರೆ, ಟಿಕೆಟ್‌ ಸಿಗದವರಿಗೆ ನಿಗಮ ಮಂಡಳಿ ಸೇರಿ ಬೇರೆ ಕಡೆ ಸ್ಥಾನ ಕಲ್ಪಿಸಿಕೊಡಲಾಗುವುದು. ಎಲ್ಲರ ಮನವೊಲಿಸುತ್ತಿದ್ದೇವೆ. ಕೆಲವರು ಬಂಡಾಯ ಏಳಬಹುದು. ಬೇರೆ ಪಕ್ಷದಲ್ಲೂ ಬಂಡಾಯ ಏಳುತ್ತಾರೆ. ಬಂಡಾಯ ಇದ್ದೇ ಇರುತ್ತೆ. ಅದಕ್ಕೆ ತಲೆ ಕೆಡಿಸಿಕೊಳ್ಳುವುದಿಲ್ಲ ಎಂದು ಡಿ.ಕೆ.ಶಿವಕುಮಾರ್‌ ಇದೇ ವೇಳೆ ತಿಳಿಸಿದರು.

Share Post