BengaluruPolitics

ಅಂಧ ವಿದ್ಯಾರ್ಥಿನಿಗೆ ನೆರವಾದ ಡಿಸಿಎಂ ಡಿ.ಕೆ.ಶಿವಕುಮಾರ್‌

ಬೆಂಗಳೂರು; ಡಿಸಿಎಂ ಡಿ.ಕೆ.ಶಿವಕುಮಾರ್‌ ಬೆಂಗಳೂರಿನಲ್ಲಿ ಜನಸ್ಪಂದನ ಕಾರ್ಯಕ್ರಮ ನಡೆಸುತ್ತಿದ್ದಾರೆ. ಇಂದು ಯಲಹಂಕದ ಅಂಬೇಡ್ಕರ್‌ ಭವನದಲ್ಲಿ ಜನಸ್ಪಂದನಾ ಕಾರ್ಯಕ್ರಮ ನಡೆಸಿದರು. ಈ ವೇಳೆ ಅವರು ಅಂಧ ವಿದ್ಯಾರ್ಥಿನಿಯೊಬ್ಬಳಿಗೆ ಕೆಲಸ ಕೊಟ್ಟು, ಆಕೆಯ ಬಾಳಿಗೆ ನೆರವಾಗಿದ್ದಾಳೆ.

ಸುಂಕದಕಟ್ಟೆ ಶಾಂತಿಧಾಮ ಸಂಸ್ಥೆಯಲ್ಲಿ ಬಿಎ ಪದವಿ ಪಡೆದಿರುವ ದಿವ್ಯಾಂಜಲಿ ಎಂಬ ಅಂಧ ವಿದ್ಯಾರ್ಥಿನಿ, ನನಗೆ ಕಣ್ಣು ಕಾಣೋದಿಲ್ಲ. ಈ ಕಾರಣಕ್ಕಾಗಿ ನನಗೆ ಯಾರೂ ಕೆಲಸ ಕೊಡುತ್ತಿಲ್ಲ. ನೀವೇ ಒಂದು ಕೆಲಸ ಕೊಡಿಸಿ ಎಂದು ದಿವ್ಯಾಂಜಲಿ ಕೇಳಿಕೊಂಡರು. ಇದಕ್ಕೆ ಡಿಸಿಎಂ ಡಿ.ಕೆ.ಶಿವಕುಮಾರ್‌ ಕೂಡಲೇ ಸ್ಪಂದಿಸಿದರು.

ದಿವ್ಯಾಂಜಲಿ ಅವರ ಪದವಿ ಸರ್ಟಿಫಿಕೇಟ್‌ಗಳನ್ನು ಪರಿಶೀಲನೆ ಮಾಡಿ ಕೂಡಾ ಅವರಿಗೆ ಕೆಲಸ ಕೊಡುವಂತೆ ಸ್ಥಳದಲ್ಲಿದ್ದ ಬಿಬಿಎಂಪಿ ಅಧಿಕಾರಿಗಳು ಡಿಸಿಎಂ ಡಿ.ಕೆ.ಶಿವಕುಮಾರ್‌ ತಾಕೀತು ಮಾಡಿದರು. ಕಾಲ್‌ ಸೆಂಟರ್‌ ಅಥವಾ ಕೂತು ಕೆಲಸ ಮಾಡುವ ಕೆಲಸ ನೀಡುವಂತೆಯೂ ಸೂಚಿಸಲಾಗಿದೆ.

 

Share Post