BengaluruPolitics

ಡಿ.ಕೆ.ಶಿವಕುಮಾರ್‌ ಹೆಸರು ಬದಲಾವಣೆಯ ವೀರ; ಮಾಜಿ ಸಚಿವ ಅಶ್ವತ್ಥನಾರಾಯಣ್‌

ಬೆಂಗಳೂರು; ಡಿ.ಕೆ.ಶಿವಕುಮಾರ್‌ ಹೆಸರು ಬದಲಾವಣೆಯ ವೀರ ಎಂದು ಮಾಜಿ ಸಚಿವ ಅಶ್ವತ್ಥ್‌ ನಾರಾಯಣ ವಾಗ್ದಾಳಿ ಮಾಡಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಕನಕಪುರವನ್ನು ಬೆಂಗಳೂರು ಜಿಲ್ಲೆಗೆ ಸೇರಿಸುವ ಬಗ್ಗೆ ಡಿ.ಕೆ.ಶಿವಕುಮಾರ್‌ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದರು.

ನೀವು ಸಾತನೂರು ವಿಧಾನಸಭಾ ಕ್ಷೇತ್ರದಿಂದ ನಾಲ್ಕು ಬಾರಿ ಗೆದ್ದಿದ್ದೀರಿ, ಕನಕಪುರ ಕ್ಷೇತ್ರದಿಂದ ನಾಲ್ಕು ಬಾರಿ ಗೆದ್ದಿದ್ದೀರಿ. ಇಷ್ಟಾದರೂ ನಿಮ್ಮ ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿಯಾಗಿಲ್ಲ. ಇಷ್ಟು ವರ್ಷದಿಂದ ನಿಮಗೆ ಅಭಿವೃದ್ಧಿಯ ಪರಿಜ್ಞಾನ ಇರಲಿಲ್ಲ. ಈಗ ನಿಮಗೆ ಪರಿಜ್ಞಾನ ಬಂತಾ ಎಂದು ಅಶ್ವತ್ಥ್‌ನಾರಾಯಣ್‌ ಅವರು ಡಿ.ಕೆ.ಶಿವಕುಮಾರ್‌ ಅವರನ್ನು ಪ್ರಶ್ನೆ ಮಾಡಿದ್ದಾರೆ.

ರಾಮನಗರಕ್ಕೆ ಹಲವರ ಕೊಡುಗೆ ಇದೆ. ಡಿ.ಕೆ.ಶಿವಕುಮಾರ್​ ರಾಮದೇವರ ಬೆಟ್ಟಕ್ಕೆ ಒಂದು ಕಲ್ಲೂ ಎತ್ತಿಟ್ಟಿಲ್ಲ. ರಾಮನಗರಕ್ಕೆ ಮೋದಿ ಕೊಡುಗೆ ಅಪಾರ ಎಂದು ಅಶ್ವತ್ಥ್‌ನಾರಾಯಣ್‌ ಇದೇ ವೇಳೆ ಹೇಳಿದರು.

Share Post