BengaluruDistrictsPolitics

ಡಿ.ಕೆ.ಶಿವಕುಮಾರ್‌ ಶಪಥ ಈಡೇರಿತಾ..?; ಫಲಿತಾಂಶಕ್ಕೂ ಮೊದಲೇ ಗಡ್ಡ ತೆಗೆಸಿದ್ದೇಕೆ..?

ಕನಕಪುರ; ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಫುಲ್‌ ಖುಷಿಯಾಗಿದ್ದಾರೆ. ಸಿಎಂ ಹುದ್ದೆ ಏರುವ ತವಕದಲ್ಲಿದ್ದಾರೆ. ಈ ನಡುವೆ ಅವರು ತಮ್ಮ ತವರೂರಲ್ಲಿ ಕೊಂಚ ರಿಲ್ಯಾಕ್ಸ್‌ ಆಗಿದ್ದು, ಇದೇ ವೇಳೆ ಅವರು ತಮ್ಮ ಗಡ್ಡವನ್ನು ಟ್ರಿಮ್‌ ಮಾಡಿಕೊಂಡಿದ್ದಾರೆ. ಇದು ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. ಚುನಾವಣೆ ಘೋಷಣೆಯಾದ ಮೇಲೆ ಡಿ.ಕೆ.ಶಿವಕುಮಾರ್‌ ಅವರು ಗಡ್ಡ ಟ್ರಿಮ್‌ ಮಾಡಿಸಿರಲಿಲ್ಲ. ಹಾಗೆಯೇ ಇರಿಸಿದ್ದರು. ಇದೀಗ ಮತದಾನ ಮುಗಿದ ತಕ್ಷಣ ಅವರು ಟ್ರಿಮ್‌ ಮಾಡಿಸಿದ್ದು, ಡಿಕೆಶಿ ಶಪಥ ಈಡೇರಿದೆಯಾ ಎಂಬು ಪ್ರಶ್ನೆಗಳು ಕೇಳಿಬರುತ್ತಿವೆ.

ನಿನ್ನೆ ಮತದಾನ ಮಾಡಿದ ಮೇಲೆ ಸ್ವಗ್ರಾಮದಲ್ಲೇ ಉಳಿದ ಡಿ.ಕೆ.ಶಿವಕುಮಾರ್‌ ಅವರು ಮೊದಲು ಗಡ್ಡ ಟ್ರಿಮ್‌ ಮಾಡಿಸಿಕೊಂಡು ರೆಡಿಯಾಗಿ ತಾಯಿಯ ಆಶೀರ್ವಾದ ಪಡೆದರು. ಅನಂತರ ಹೋಟೆಲ್‌ಗೆ ಹೋಗಿ ಇಡ್ಲಿ ಸೇವನೆ ಮಾಡಿದರು. ಈಗ ನೀಡಾಗಿ ರೆಡಿಯಾಗಿರುವ ಡಿ.ಕೆ.ಶಿವಕುಮಾರ್‌ ಎಲ್ಲರಿಗೂ ವಿಶೇಷವಾಗಿ ಕಾಣುತ್ತಿದ್ದಾರೆ. ಹಾಗೆಯೇ ಈ ಬಗ್ಗೆ ಚರ್ಚೆಗೂ ಕಾರಣರಾಗಿದ್ದಾರೆ.

ಈ ಚರ್ಚೆಗೆ ಕಾರಣವೂ ಇದೆ. ಡಿ.ಕೆ.ಶಿವಕುಮಾರ್‌ ಅವರು ಗಡ್ಡ ಬಿಟ್ಟಿದ್ದರ ಬಗ್ಗೆ ಹಲವು ಮಾತನಾಡುತ್ತಿದ್ದರು. ಯಾಕೆ ಗಡ್ಡ ಬಿಟ್ಟಿದ್ದಾರೆ ಎಂದು ಪ್ರಶ್ನೆ ಮಾಡುತ್ತಿದ್ದರು. ಈ ಬಗ್ಗೆ ಒಂದು ದಿನ ಡಿ.ಕೆ.ಶಿವಕುಮಾರ್‌ ಸಹೋದರ ಹಾಗೂ ಸಂಸದ ಡಿ.ಕೆ.ಸುರೇಶ್‌ ಮಾತನಾಡಿದ್ದರು. ಎಲ್ಲರೂ ಈ ಬಗ್ಗೆ ಕೇಳುತ್ತಿದ್ದಾರೆ. ಇದಕ್ಕೆ ಮೇ 13 ರಂದು ಉತ್ತರ ಸಿಗಲಿದೆ ಎಂದು ಹೇಳಿದ್ದರು. ಈ ಮಾತು ಕೇಳಿ ಡಿ.ಕೆ.ಶಿವಕುಮಾರ್‌ ರಾಜ್ಯದಲ್ಲಿ ಕಾಂಗ್ರೆಸ್‌ ಗೆಲ್ಲೋತನಕ ಶಪಥ ಮಾಡಿರಬಹುದು ಎಂದು ನಂಬಿದ್ದರು. ಇದೀಗ ಡಿ.ಕೆ.ಶಿವಕುಮಾರ್‌ ಫಲಿತಾಂಶಕ್ಕೂ ಮೊದಲೇ ಗಡ್ಡ ಟ್ರಿಮ್‌ ಮಾಡಿಸಿದ್ದಾರೆ. ಹೀಗಾಗಿ ಅವರ ಸಪಥ ಈಡೇರಿತಾ..? ಹಾಗಾದರೆ ಕಾಂಗ್ರೆಸ್‌ ಗೆಲ್ಲೋದು ಗ್ಯಾರೆಂಟಿನಾ ಎಂದು ಜನ ಮಾತನಾಡುತ್ತಿದ್ದಾರೆ.

Share Post