Bengaluru

ಚಂದ್ರು ಕೊಲೆ ಪ್ರಕರಣ; 5 ಲಕ್ಷ ಕೊಟ್ಟು ಸುಳ್ಳು ಹೇಳಿಸಿದ್ದಾರೆ; ಬಿಜೆಪಿ ವಿರುದ್ಧ ಜಮೀರ್‌ ಆರೋಪ

ಬೆಂಗಳೂರು: ಗೋರಿಪಾಳ್ಯದಲ್ಲಿ ನಡೆದ ಚಂದ್ರು ಹತ್ಯೆ ಕೇಸ್‌ನಲ್ಲಿ ಬಿಜೆಪಿ ನಾಯಕರು ರಾಜಕೀಯ ಮಾಡುತ್ತಿದ್ದಾರೆ ಎಂದು ಶಾಸಕ ಜಮೀರ್‌ ಅಹಮದ್‌ ಖಾನ್‌ ಆರೋಪ ಮಾಡಿದ್ದಾರೆ. ಬೆಂಗಳೂರಿನಲ್ಲಿ ನಡೆದ ಮುಸ್ಲಿಂ ಮುಖಂಡರ ಸಭೆಯಲ್ಲಿ ಮಾತನಾಡಿರುವ ಅವರು, ಕೊಲೆಯಾದ ಚಂದ್ರು ಜೊತೆ ಹೋದವನ ಬಳಿ ಬಿಜೆಪಿ ನಾಯಕರು ಸುಳ್ಳು ಹೇಳಿಸಿದ್ದಾರೆ. ಅದಕ್ಕಾಗಿ ಅವನಿಗೆ ಐದು ಲಕ್ಷ ರೂಪಾಯಿ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.

ಆರೋಪಿಗಳಿಗೆ ಚಂದ್ರು ಹತ್ಯೆ ಮಾಡಬೇಕೆಂಬ ಉದ್ದೇಶ ಇರಲಿಲ್ಲ. ಹೀಗಾಗಿಯೇ ತೊಡೆಗೆ ಇರಿದಿದ್ದಾರೆ. ಆದ್ರೆ ನರ ಕಟ್‌ ಆಗಿದ್ದರಿಂದಾಗಿ ಹೆಚ್ಚು ರಕ್ತಸ್ರಾವವಾಗಿ ಚಂದ್ರು ಮೃತಪಟ್ಟಿದ್ದಾನೆ. ಆದ್ರೆ, ಕೊಲೆಯನ್ನು ನಾನು ಸಮರ್ಥಿಸುವುದಿಲ್ಲ. ಆರೋಪಿಗಳಿಗೆ ಶಿಕ್ಷೆಯಾಗಲೇಬೇಕು. ಆದ್ರೆ ಈ ಕೊಲೆ ವಿಚಾರದಲ್ಲಿ ಬಿಜೆಪಿ ರಾಜಕೀಯ ಮಾಡುತ್ತಿದೆ. ವಿನಾಕಾರಣ ಭಾಷೆ ಮಧ್ಯೆ ತರುತ್ತಿದೆ ಎಂದು ಜಮೀರ್‌ ಅಹಮದ್‌ ಖಾನ್‌ ಆರೋಪಿಸಿದರು.

ಬಿಜೆಪಿ ನಾಯಕರು ಕೊಲೆ ನಡೆದು ಎರಡು ದಿನಗಳ ನಂತರ ಬಂದರು. ಶವ ಇರುವಾಗಲೇ ಯಾರೂ ಬಂದಿರಲಿಲ್ಲ. ನಂತರ ಬಂದು ಏನೇನೋ ಕಥೆ ಕಟ್ಟಲಾಯಿತು. ಹತ್ಯೆಯಾದವನ ಜೊತೆಗಿದ್ದವನಿಂದಲೂ ಸುಳ್ಳು ಹೇಳಿಸಲಾಯಿತು ಎಂದು ಜಮೀರ್‌ ಅಹಮದ್‌ ಖಾನ್‌ ಆರೋಪಿಸಿದರು.

 

Share Post