BengaluruPolitics

ಹಿಜಾಬ್ ನಿಷೇಧ ವಾಪಸ್‌ ಪಡೆದ ಕಾಂಗ್ರೆಸ್‌ ಸರ್ಕಾರ; ಮತ್ತೆ ಶುರುವಾಯ್ತು ಚರ್ಚೆ

ಮೈಸೂರು; ರಾಜ್ಯದಲ್ಲಿ ಹಿಜಾಬ್‌ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ. ಬಿಜೆಪಿ ಸರ್ಕಾರ ಇದ್ದಾಗ ಶಾಲಾ-ಕಾಲೇಜಿಗೆ ಹಿಜಾಬ್‌ ಧರಿಸಿ ಬರೋದನ್ನ ನಿಷೇಧ ಮಾಡಲಾಗಿತ್ತು. ಹೀಗಾಗಿ ಇದು ದೊಡ್ಡ ವಿವಾದ ಎದ್ದಿತ್ತು. ಇದೀಗ ಸಿಎಂ ಸಿದ್ದರಾಮಯ್ಯ ಈ ಬಗ್ಗೆ ಹೇಳಿಕೆ ನೀಡಿದ್ದು, ಈ ಬಗ್ಗೆ ಮತ್ತೆ ಚರ್ಚೆ ಶುರುವಾಗಿದೆ.

ನಿನ್ನೆ ಸಂಜೆ ಸಿಎಂ ಸಿದ್ದರಾಮಯ್ಯ ಅವರು ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಕವಲಂದೆ ಗ್ರಾಮದಲ್ಲಿ ಮಾತನಾಡಿದರು. ಶಾಲಾ-ಕಾಲೇಜುಗಳಲ್ಲಿ ಹಿಜಾಬ್‌ ನಿಷೇಧವನ್ನು ವಾಪಸ್‌ ಪಡೆಯಲು ಸೂಚನೆ ಕೊಟ್ಟಿದ್ದೇನೆ ಅಂತ ಅವರು ಹೇಳಿದರು. ಬಿಜೆಪಿ ಪಕ್ಷ ಸಮಾಜ ಒಡೆಯುವ ಕೆಲಸ ಮಾಡುತ್ತಿದೆ. ಅದು ಸರಿಯಲ್ಲ. ಮೋದಿಯವರು ಸಬ್‌ ಕಾ ಸಾಥ್‌ ವಿಕಾಸ್‌ ಬರೀ ಬೋಗಸ್‌ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

Share Post