DistrictsPolitics

ʻಜಂಬೂ ಸವಾರಿಗೆ ಸಿದ್ದರಾಮಯ್ಯ ಪುಷ್ಪಾರ್ಚನೆ ಮಾಡೋದು ಅನುಮಾನʼ

ಮೈಸೂರು; ಈ ಬಾರಿಯ ಮೈಸೂರು ದಸರಾದ ಜಂಬೂ ಸವಾರಿಗೆ ಸಿಎಂ ಸಿದ್ದರಾಮಯ್ಯ ಪುಷ್ಪಾರ್ಚನೆ ಮಾಡುವುದು ಅನುಮಾನ ಎಂದು ಬಿಜೆಪಿ ಶಾಸಕ ಶ್ರೀವತ್ಸ ಹೇಳಿದ್ದಾರೆ.. ಮೈಸೂರಿನಲ್ಲಿ ಮಾತನಾಡಿದ ಅವರು, ದಸರಾಗೆ ಮೊದಲೇ ಸಿದ್ದರಾಮಯ್ಯ ಅವರು ಸಿಎಂ ಸ್ಥಾನದಿಂದ ಕೆಳಗಿಳಿಯುವ ಸಾಧ್ಯತೆ ಇದೆ ಎಂದು ಭವಿಷ್ಯ ನುಡಿದಿದ್ದಾರೆ…
ಮುಡಾ ಸೈಟ್‌ಗಳನ್ನು ವಾಪಸ್‌ ತೆಗೆದುಕೊಳ್ಳಿ ಎಂದು ಸಿಎಂ ಪತ್ನಿ ಪಾರ್ವತಿ ಪತ್ರ ಬರೆದಿದ್ದಾರೆ.. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಶಾಸಕ ಶ್ರೀವತ್ಸ ಅವರು, ಇನ್ನು ಹತ್ತು ದಿನಗಳೊಳಗಾಗಿ ರಾಜ್ಯ ರಾಜಕೀಯದಲ್ಲಿ ಬಹುತೇಕ ಬದಲಾವಣೆಯಾಗುತ್ತದೆ.. ಸಿದ್ದರಾಮಯ್ಯ ಅವರ ಇಂದಿನ ಸ್ಥಿತಿಗೆ ಅವರ ಸುತ್ತ ಇರುವ ಹಿತಶತ್ರುಗಳೇ ಕಾರಣ ಎಂದೂ ಹೇಳಿದ್ದಾರೆ.. ಸಿಎಂ ಪತ್ನಿ ಈಗ ಸೈಟ್‌ ವಾಪಸ್‌ ಕೊಡುತ್ತಿದ್ದಾರೆ.. ಮೂರು ತಿಂಗಳಿಂದ ತಮ್ಮ ಪತಿಯ ಮರ್ಯಾದೆ ಹೋಗ್ತಿದ್ದದ್ದು ನೋಡಿರಲಿಲ್ಲವೇ ಎಂದೂ ಶಾಸಕ ಶ್ರೀವತ್ಸ ಪ್ರಶ್ನೆ ಮಾಡಿದ್ದಾರೆ..
ಈ ಪ್ರಕರಣದಲ್ಲಿ ಇಡಿ ಎಂಟ್ರಿಯಾಗಿದೆ.. ಈ ಹಿನ್ನೆಲೆಯಲ್ಲಿ ತರಾತುರಿಯಲ್ಲಿ ಸೈಟ್‌ಗಳನ್ನು ವಾಪಸ್‌ ಕೊಡುತ್ತಿರುವುದಾಗಿ ಹೇಳಿದ್ದಾರೆ.. ಈ ಮನಸ್ಸು ಮೊದಲೇ ಯಾಕಿರಲಿಲ್ಲ ಎಂದು ಶಾಸಕರು ಪ್ರಶ್ನೆ ಮಾಡಿದ್ದಾರೆ..

Share Post