BengaluruCrime

ಪಾಲಿಕೆ ಜಾಗ ಒತ್ತುವರಿ ತೆರವು; ಗಾಂಧಿ ಬಜಾರ್‌ನಲ್ಲಿ ಬೆಳ್ಳಂಬೆಳಗ್ಗೆ ಜೆಸಿಬಿ ಸದ್ದು

ಬೆಂಗಳೂರು; ಬೆಂಗಳೂರಿನಲ್ಲಿ ಇಂದು ಬೆಳ್ಳಂಬೆಳಗ್ಗೆ ಜೆಸಿಬಿಗಳು ಸದ್ದು ಮಾಡಿದೆ. ಪಾಲಿಕೆ ಅಧಿಕಾರಿಗಳು ಪಾಲಿಕೆ ಜಾಗದ ಒತ್ತುವರಿಯನ್ನು ತೆರವು ಮಾಡಿದ್ದಾರೆ. ಸುಮಾರು 9000 ಚದರ ಮೀಟರ್‌ ಜಾಗವನ್ನು ಪಾಲಿಕೆ ಮತ್ತೆ ತನ್ನ ವಶಕ್ಕೆ ಪಡೆದಿದೆ.

 

ಇಂದು ಬೆಳಗ್ಗೆ  ಬಿಬಿಎಂಪಿ ದಕ್ಷಿಣ ವಲಯ ವ್ಯಾಪ್ತಿಯಲ್ಲಿ ಬಸವನಗುಡಿಯ ಗಾಂಧಿ ಬಜಾರ್ ನ ವಿದ್ಯಾರ್ಥಿ ಭವನ ಎದುರಿಗೆ ಇದ್ದ ಸುಮಾರು 9,000 ಚದರ ಮೀಟರ್ ಸ್ಥಳವನ್ನು ಪಾಲಿಕೆ ವಶಕ್ಕೆ ಪಡೆಯಲಾಯಿತು. ಇದು ಪಾಲಿಕೆ ಜಾಗವಾಗಿದ್ದು, ಖಾಸಗಿ ವ್ಯಕ್ತಿಗಳನ್ನು ಅದನ್ನು ಒತ್ತುವರಿ ಮಾಡಿಕೊಂಡಿದ್ದರು. ಅಲ್ಲಿ ಕಾಂಪೌಂಡ್‌ ಹಾಗೂ ಕಟ್ಟಡ ಕಟ್ಟಲಾಗಿತ್ತು. ಈ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಿದ ಅಧಿಕಾರಿಗಳು, ಕಟ್ಟಡ ಹಾಗೂ ಕಾಂಪೌಂಡ್‌ನ್ನು ಜೆಸಿಬಿ ಮೂಲಕ ತೆರವುಗೊಳಿಸಿದರು. ಅನಂತರ ಈ ಜಾಗ ಪಾಲಿಕೆಗೆ ಸೇರಿದ್ದು ಎಂದು ಬೋರ್ಡ್‌ ನೆಡಲಾಯಿತು.

Share Post