BengaluruPolitics

ಅನ್ನಭಾಗ್ಯ ಯೋಜನೆಯನ್ನು ಹೊಗಳಿದ ಬಿಜೆಪಿ ಶಾಸಕ ಗುರುರಾಜ್

ಬೆಂಗಳೂರು; ಸಿದ್ದರಾಮಯ್ಯ ನೇತೃತ್ವದಲ್ಲಿ ಸರ್ಕಾರ ಜಾರಿಗೆ ತಂದಿರುವ ಅನ್ನಭಾಗ್ಯ ಯೋಜನೆಯನ್ನು ಬಿಜೆಪಿ ಶಾಸಕರು ಹಾಡಿಹೊಗಳಿದ್ದಾರೆ. ಬಜೆಟ್‌ ಮೇಲಿನ ಚರ್ಚೆ ವೇಳೆ ವಿಧಾನಸಭೆಯಲ್ಲಿ ಮಾತನಾಡಿದ ಬಿಜೆಪಿ ಶಾಸಕ ಗುರುರಾಜ್‌ ಗಂಟಿಹೊಳಿ, ಇದು ಬಡವರ ಹೊಟ್ಟೆ ತುಂಬಿಸುವ ಯೋಜನೆ ಎಂದು ಹೇಳಿದರು.

ಈ ಬಗ್ಗೆ ಯೋಚನೆ ಮಾಡಿದವರು ಹಾಗೂ ಈ ಯೋಜನೆಯನ್ನು ರೂಪಿಸಿದವರಿಗೆ ನಾನು ಅಭಿನಂದನೆ ತಿಳಿಸುತ್ತೇನೆ. ಯಾವುದೇ ಸರ್ಕಾರ ಈ ಯೋಜನೆಯನ್ನು ಜಾರಿ ಮಾಡಿರಲಿ. ನಾನು ಮಾತ್ರ ಈ ಯೋಜನೆಯನ್ನು ಸ್ವಾಗತ ಮಾಡುತ್ತೇನೆ ಎಂದು ಗುರುರಾಜ್‌ ಗಂಟಿಹೊಳಿ ಹೇಳಿದ್ದಾರೆ.

 

 

Share Post