BengaluruDistrictsPolitics

ಕಾಂಗ್ರೆಸ್‌ ಬಸ್‌ ಯಾತ್ರೆಗೆ ಹಿನ್ನೆಲೆ; ಬೆಳಗಾವಿ ವೀರಸೌಧಕ್ಕೆ ಡಿಕೆಶಿ ಭೇಟಿ

ಬೆಂಗಳೂರು; ಮಹಾತ್ಮ ಗಾಂಧೀಜಿ ಅಧ್ಯಕ್ಷತೆಯಲ್ಲಿ 1924ರಲ್ಲಿ ನಡೆದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 39 ನೇ ಮಹಾಧಿವೇಶನ ನಡೆದ ಬೆಳಗಾವಿಯ ವೀರಸೌಧಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಇಂದು ಭೇಟಿ ನೀಡಿದ್ದರು.

ಗಾಂಧೀಜಿ ಅವರ ಪ್ರತಿಮೆಗೆ ಡಿ.ಕೆ.ಶಿವಕುಮಾರ್‌ ನಮಿಸಿದರು. ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಜನವರಿ 11 ರಿಂದ ಬಸ್‌ ಯಾತ್ರೆ ನಡೆಸಲಿದೆ. ಈ ವೀರಸೌಧದಿಂದಲೇ ಈ ಯಾತ್ರೆ ಶುರುವಾಗಲಿದೆ. ಈ ಹಿನ್ನೆಲೆಯಲ್ಲಿ ಸ್ಥಳಕ್ಕೆ ಡಿ.ಕೆ.ಶಿವಕುಮಾರ್‌ ಭೇಟಿ ನೀಡಿದ್ದರು.

ಈ ವೇಳೆ ಮಾಜಿ ಶಾಸಕ ಫಿರೋಜ್ ಸೇಠ್, ಡಿಸಿಸಿ ಅಧ್ಯಕ್ಷರಾದ ವಿನಯ್ ನವಲಗಟ್ಟಿ, ರಾಜಸೇಠ್ ಮತ್ತಿತರರು ಜತೆಗಿದ್ದರು.

Share Post