Bengaluru

ಇನ್ನೂ ಮೂವರು ಪ್ರಭಾವಿಗಳ ಮೇಲೆ ದಾಳಿ ಅಗತ್ಯ; ಬಿಡಿಎ ಅಧ್ಯಕ್ಷ ಎಸ್‌.ಆರ್‌.ವಿಶ್ವನಾಥ್‌

ಬೆಂಗಳೂರು: ಎಸಿಬಿ ದಾಳಿಗೆ ಒಳಗಾಗಿರುವ ವ್ಯಕ್ತಿ ನನ್ನ ಮೇಲೆ ಮಾನಹಾನಿ ಕೇಸ್ ಹಾಕಿದ್ದ. 25 ಕೋಟಿ ರೂ. ಮಾನ ಹಾನಿ ಕೇಸ್ ದಾಖಲು ಮಾಡಿದ್ದಾನೆ. ಅವರ ಹೆಸರು ಬೇಡ ಎಂದು ಬಿಡಿಎ ಅಧ್ಯಕ್ಷ ಎಸ್‌.ಆರ್‌.ವಿಶ್ವನಾಥ್‌ ಹೇಳಿದ್ದಾರೆ. ಬ್ರೋಕರ್‌ಗಳ ಆಸ್ತಿಗಳ ಮೇಲೆ ಎಸಿಬಿ ದಾಳಿ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಇನ್ನೂ ಮೂವರು ಪ್ರಭಾವಿಗಳ ಮೇಲೆ ದಾಳಿ ನಡೆಯಬೇಕು. ಈ ದಾಳಿಯಲ್ಲಿ ಅವರ ಲಿಂಕ್‌ಗಳು ಸಿಗುವ ಸಾಧ್ಯತೆಯಿದೆ ಎಂದರು.

   ನಾನು ಇರುವಾಗ ಯಾವ ಬ್ರೋಕರ್ ಬಂದ್ರೂ ಬಿಡುತ್ತಿರಲಿಲ್ಲ. ಒಳಗೆ ಯಾರನ್ನೂ ಬಿಡಬಾರದು ಅಂತ ಹೇಳಿದ್ದೆ. ನಾನು ಇಲ್ಲಿ ಮಾತನಾಡುವುದನ್ನು ಅವರಿಗೆ ತಿಳಿಸುವ ಲಿಂಕ್ ಇಟ್ಟುಕೊಂಡಿದ್ದಾರೆ. ಕೆಲವು ಅಧಿಕಾರಿಗಳನ್ನು ಅವರು ಕರೆಸಿಕೊಂಡು ವ್ಯವಹಾರ ಮಾಡಿರುವುದು ನಿಜ. ದಾಳಿಯಲ್ಲಿ ಭಾಗಿಯಾದ ಎಲ್ಲರನ್ನೂ ಹೊರಗೆ ತೆಗೆಯುತ್ತೇವೆ. ಎಸಿಬಿಗೆ ಹಲ್ಲಿಲ್ಲ ಅಂತಿದ್ರು, ಅದನ್ನು ಸುಳ್ಳು ಮಾಡುತ್ತೇವೆ. ಅಧಿಕಾರಿಗಳು ಸಮರ್ಥವಾಗಿ ರೇಡ್ ಮಾಡುತ್ತಿದ್ದಾರೆ. ಕೋಟ್ಯಂತರ ರೂ. ಆಸ್ತಿ ಬಿಡಿಎಗೆ ಬರಬೇಕು. ಒಳ್ಳೆದು ಆಗುತ್ತೆ ಎಂದು ಅಂದು ಕೊಂಡಿದ್ದೇವೆ ಎಂದು ತಿಳಿಸಿದರು.

Share Post