BengaluruCrime

ಸರಗಳ್ಳರ ಗ್ಯಾಂಗ್‌ ಬಂಧಿಸಿದ ಬಗಲಗುಂಟೆ ಪೊಲೀಸರು

ಬೆಂಗಳೂರು; ರಾಜ್ಯದ ವಿವಿಧ ಭಾಗಗಳಲ್ಲಿ ಸರಗಳ್ಳನ ನಡೆಸುತ್ತಿದ್ದ ಹಲವು ಪ್ರಕರಣಗಳಲ್ಲಿ ಬೇಕಾಗಿದ್ದ ಕಳ್ಳರ ಗ್ಯಾಂಗ್‌ ಅನ್ನು ಬಂಧಿಸುವಲ್ಲಿ ಬಾಗಲಗುಂಟೆ ಪೊಲೀಸರು ಯಶಸ್ವಿಯಾಗಿದ್ದಾರೆ. ಅಚ್ಯುತ್‌ ಕುಮಾರ್ ಅಲಿಯಾಸ್ ಗಣಿ, ಪ್ರಸನ್ನ, ಸಿದ್ದರಾಜು ಬಂಧಿತ ಆರೋಪಿಗಳು.

ಈ ಗ್ಯಾಂಗ್‌ ರಾಜ್ಯದ ನಾನಾ ಭಾಗಗಳಲ್ಲಿ ಸರಗಳ್ಳತನ ಮಾಡಿದೆ. ಹಲವು ಬಾರಿ ಜೈಲುವಾಸ ಕೂಡಾ ಅನುಭವಿಸಿದೆ. ಆದರೂ ಅವರು ತಮ್ಮ ಚಾಳಿ ಬಿಟ್ಟಿಲ್ಲ. ಈ ಗ್ಯಾಂಗ್ ನಾಯಕನ ವಿರುದ್ದ 157 ಪ್ರಕರಣಗಳು ದಾಖಲಾಗಿವೆ.

ಗ್ಯಾಂಗ್​ ಬಾಗಲಗುಂಟೆ, ನಂದಿನಿಲೇಔಟ್, ವಿದ್ಯಾರಣ್ಯಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇವರು ಸರಗಳ್ಳತನ ಮಾಡಿದ್ದಾರೆ. ಬೆಂಗಳೂರಿನಲ್ಲಿಯೇ 30 ಪ್ರಕರಣಗಳು ಇವರ ವಿರುದ್ಧ ದಾಖಲಾಗಿವೆ. ಆರೋಪಿಗಳಿಂದ 5 ಲಕ್ಷ ಮೌಲ್ಯದ 100 ಗ್ರಾಂ ಚಿನ್ನಾಭರಣ, ಬೈಕ್ ವಶಪಡಿಸಿಕೊಳ್ಳಲಾಗಿದೆ. ಬಾಗಲಗುಂಟೆ ಪೊಲೀಸರು ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿದ್ದಾರೆ.

Share Post