Districts

ಮಳೆಯನ್ನೂ ಲೆಕ್ಕಿಸದೇ ಪಾದಯಾತ್ರೆ ಮಾಡಿದ ರಾಹುಲ್‌ ಗಾಂಧಿ

ಚಿತ್ರದುರ್ಗ; ಭಾರತ್‌ ಜೋಡೋ ಯಾತ್ರೆ ನಡೆಸುತ್ತಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸುರಿಯುತ್ತಿರುವ ಮಳೆಯಲ್ಲಿಯೇ ಹೆಜ್ಜೆ ಹಾಕಿದ್ದಾರೆ. ಚಿತ್ರದುರ್ಗ ಜಿಲ್ಲೆಯಲ್ಲಿ ಪಾದಯಾತ್ರೆ ಮಾಡುತ್ತಿರುವ ವೇಳೆ ಮಳೆ ಬಂದಿದೆ. ಆದರೂ ಅವರು ಅಪಾರ ಪ್ರಮಾಣದ ಅಭಿಮಾನಿಗಳ ಜೊತೆ ಮಳೆಯಲ್ಲಿಯೇ ಹೆಜ್ಜೆ ಹಾಕಿದರು.

ಹಿರಿಯೂರು ನಗರದ ಹುಳಿಯಾರು ರಸ್ತೆಯಲ್ಲಿ ಪಾದಯಾತ್ರೆ ಸಾಗುತ್ತಿದ್ದಾಗ ತುಂತುರು ಮಳೆ ಶುರುವಾಗಿದೆ. ನಂತರ ಅದು ಬಿರುಗೊಂಡಿದೆ. ವೇದಾವತಿ ನದಿಯ ಸೇತುವೆಯ ಮೇಲೆ ಪಾದಯಾತ್ರೆ ಸಾಗುವಾಗ ಮಳೆ ಹೆಚ್ಚಾಗಿದ್ದು, ಆದರೂ ಯಾತ್ರೆ ನಿಲ್ಲಿಸದೇ ಮುಂದೆ ಸಾಗಿದರು. ಪಾದಯಾತ್ರೆಯಲ್ಲಿದ್ದ ಜನರು ರಾಹುಲ್ ಜೊತೆಗೆ ಹೆಜ್ಜೆ ಹಾಕಿದರು. ರಸ್ತೆಯ ಎರಡೂ ಬದಿಯಲ್ಲಿ ನಿಂತಿದ್ದ ಜನರು ಕೈಬೀಸಿ ಯಾತ್ರೆಗೆ ಬೆಂಬಲ ಸೂಚಿಸುತ್ತಿದ್ದದ್ದು ಕಂಡುಬಂತು.

Share Post