Bengaluru

ಮಣ್ಣಲ್ಲಿ ಮಣ್ಣಾದ ಕಲಾ ತಪಸ್ವಿ- ಸ್ನೇಹಿತನ ತೋಟದಲ್ಲಿ ನಟ ರಾಜೇಶ್‌ ಅಂತ್ಯಕ್ರಿಯೆ

ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ನಟ ಕಲಾ ತಪಸ್ವಿ ನಟ ರಾಜೇಶ್‌ ಅವರ ಅಂತ್ಯಕ್ರಿಯೆ ನಡೆದಿದೆ. ಇಂದು ಸಂಜೆ ಅವರ ಅಭಿಮಾನಿ ಸ್ನೇಹಿತನ ತೋಟದಲ್ಲಿ ಅಂತ್ಯಕ್ರಿಯೆ ನಡೆದಿದೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ರಾಜೇಶ್‌ ಅವರಿಗೆ ಚಿಕಿತ್ಸೆ ನೀಡಲಾಗ್ತಿತ್ತು, ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಗ್ಗೆ ನಿಧನರಾದ್ರು.

ಹಾಲುಮತದ ಸಂಪ್ರದಾಯದಂತೆ ಸರ್ಕಾರಿ ಗೌರವಗಳೊಂದಿಗೆ ನಟ ರಾಜೇಶ್‌ ಅವರ ಅಂತ್ಯಕ್ರಿಯೆ ನಡೆದಿದೆ. ಇಬ್ಬರ ಪುತ್ರರಾದ ಸದಾನಂದ, ಧನಂಜಯ, ಅಳಿಯ ಅಜೂನ್‌ ಸಜ ಅಂತಿಮ ವಿಧಿವಿಧಾನಗಳನ್ನು ನೆರೆವೇರಿಸಿದ್ದಾರೆ.  ನಟ ರಾಜೇಶ್‌ ಅವರ ಅಂತ್ಯಕ್ರಿಯೆ ಬೆಂಗಳೂರು ಉತ್ತರ ತಾಲೂಕಿನ ಗೋವಿಂದಪುರದ ಸಿದ್ದಲಿಂಗಯ್ಯನವರ ತೋಟದಲ್ಲಿ ನಡೆದಿದೆ.

ರಾಜೇಶ್‌ ಅವರ ಅಂತ್ಯಕ್ರಿಯೆಯಲ್ಲಿ ಕುಟುಂಬಸ್ಥರು, ಆಪ್ತರು, ಸಿನಿಮಾ ಗಣ್ಯರು ಭಾಗಿಯಾಗಿದ್ರು. ಹಿರಿಯ ನಟನನ್ನು ಕಳೆದುಕೊಂಡು ಸಿನಿಮಾ ಮಂದಿ ಸಂತಾಪ ಸೂಚಿಸಿದ್ದಾರೆ.

 

Share Post