Bengaluru

ಡಾ. ರಾಜ್‌ಕುಮಾರ್‌ ಕುಟುಂಬಕ್ಕೆ ಮತೊಂದು ಆಘಾತ-ಅಪ್ಪು ಮಾವ ಅಶ್ವಿನಿ ಅವರ ತಂದೆ ನಿಧನ

ಬೆಂಗಳೂರು: ಮೊನ್ನೆಯಷ್ಟೇ ಅಪ್ಪು ಅವರನ್ನು ಕಳೆದುಕೊಂಡು ತೀವ್ರ ದುಃಖದಲ್ಲಿದ್ದ ಅಶ್ವಿನಿ ಅವರಿಗೆ ಮತ್ತೊಂದು ಆಘಾತ ಉಂಟಾಗಿದೆ. ಪತಿಯನ್ನು ಕಳೆದುಕೊಂಡು ನಾಲ್ಕು ತಿಂಗಲೂ ಆಗಿಲ್ಲ. ಈಗ ಮತ್ತೆ  ಅಶ್ವಿನಿಯವರು ತಮ್ಮ ತಂದೆಯನ್ನು ಸಹ ಕಳೆದುಕೊಂಡಿದ್ದಾರೆ. ಹೃದಯಾಘಾತದಿಂದಾಗಿ ಅಶ್ವಿನಿ ಅವರ ತಂದೆ ರೇವನಾಥ್‌ ಸಾವನ್ನಪ್ಪಿದ್ದಾರೆ.

ಬೆಳಗ್ಗೆ ವಾಕಿಂಗ್‌ ಮಾಡುವಾಗ ಇದ್ದಕ್ಕಿದ್ದಂತೆ ಕುಸಿದು ಬಿದ್ದಿದ್ದಾರೆ. ಕೂಡಲೇ ಅವರನ್ನು ಎಂ.ಎಸ್.ರಾಮಯ್ಯ ಆಸ್ಪತ್ರೆಯಲ್ಲಿ ದಾಖಲು ಮಾಡಲಾಯ್ತು. ಚಿಕಿತ್ಸೆ ಫಲಕಾರಿಯಾಗದೆ ಇಂದು ಮೃತಪಟ್ಟಿದ್ದಾರೆ. ಮೂಲತಃ ಚಿಕ್ಕಮಗಳೂರಿನವರಾದ ರೇವನಾಥ್‌ ಅವರು NHAIನಲ್ಲಿ ಮುಖ್ಯ ಎಂಜಿನಿಯರ್‌ ಆಗಿ ಕೆಲಸ ಮಾಡಿದ್ದಾರೆ. ಇಪ್ಪತ್ತು ವರ್ಷಗಳ ಹಿಂದೆ ಆಂಜಿಯೋಪ್ಲಾಸ್ಟಿ ಸರ್ಜರಿಗೆ ಒಳಗಾಗಿದ್ದರು ಎನ್ನಲಾಗಿದೆ.

ರೇವನಾಥ್‌  ಅವರಿಗೆ 78ವರ್ಷ ವಯಸ್ಸಾಗಿದ್ದು, ಅಳಿಯನ ಸಾವಿನ ನಂತರ ಬಹಳ ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗಿದೆ. ರಾಜ್‌ ಕುಟುಂಬ ಸಾವಿನ್ನಲ್ಲೂ ಸಾರ್ಥಕತೆ ಮರೆಯುತ್ತಿದ್ದಾರೆ. ಅಪ್ಪು ಕೂಡ ತನ್ನ ಕಣ್ಣುಗಳನ್ನು ದಾನ ಮಾಡಿದ್ರು. ಈಗ ಅವರ ತಂದೆಯ ಕಣ್ಣುಗಳನ್ನು ದಾನ ಮಾಡಲು ಕುಟುಂಬಸ್ಥರು ತೀರ್ಮಾನ ಮಾಡಿದ್ದಾರೆ.

ನೇತ್ರದಾನದ ಬಳಿಕ ಪಾರ್ಥಿವ ಶರೀರವನ್ನು ಆರ್.ಟಿ.ನಗರದ ನಿವಾಸಕ್ಕೆ ಕೊಂಡೊಯ್ಯಲಾಗುತ್ತದೆ ಅಲ್ಲಿಂದ ಚಿಕ್ಕಮಗಳೂರಿನ ನಿವಾಸಕ್ಕೆ ತೆಗೆದುಕೊಂಡು ಹೋಗಲಾಗುತ್ತದೆ ಎನ್ನಲಾಗಿದೆ. ಅಪ್ಪು ಸಾವಿನಿಂದ ಹೊರಬರಲಾರದೆ ನೋವಿನಲ್ಲಿರುವ ಅಶ್ವಿನಿ ಅವರಿಗೆ ಈ ಸುದ್ದಿ ಬರಸಿಡಿಲು ಬಡಿದಂತಾಗಿದೆ. ಅಭಿಮಾನಿಗಳು ಕಟುಟಂಸ್ಥರು ಅಶ್ವಿನಿಯವರಿಗೆ ಸಾಂತ್ವನ ತಿಳಿಸುತ್ತಿದ್ದಾರೆ.

Share Post