BengaluruCinemaCrime

ದರ್ಶನ್‌, ಪವಿತ್ರಾ ಗೌಡಗೆ ಸಿಗುತ್ತಾ ಬಿಡುಗಡೆ ಭಾಗ್ಯ?; ಇಂದೇ ಜಾಮೀನು ಆದೇಶ

ಬೆಂಗಳೂರು; ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಜೈಲು ಸೇರಿರುವ ನಟ ದರ್ಶನ್‌ ಹಾಗೂ ಪವಿತ್ರಾಗೌಡ ಅವರಿಗೆ ಇಂದು ಮಹತ್ವದ ದಿನ.. ಇಂದು ಅವರ ಜಾಮೀನು ಅರ್ಜಿಯ ಕುರಿತಂತೆ ಆದೇಶ ಹೊರಬೀಳಲಿದೆ.. ಸಿಟಿ ಸಿವಿಲ್‌ ಕೋರ್ಟ್‌ ಇಂದು ಈ ಇಬ್ಬರು ಜಾಮೀನು ಭವಿಷ್ಯವನ್ನು ನಿರ್ಧಾರ ಮಾಡಲಿದೆ.. ಈ ಹಿನ್ನೆಲೆಯಲ್ಲಿ ದರ್ಶನ್‌ ಅಭಿಮಾನಿಗಳು ಈ ಆದೇಶಕ್ಕಾಗಿ ಕಾತರದಿಂದ ಕಾಯುತ್ತಿದ್ದಾರೆ..
ದರ್ಶನ್‌ ಹಾಗೂ ಪವಿತ್ರಾ ಗೌಡ ಜೈಲಿನಲ್ಲಿ ನೂರು ದಿನ ಪೂರೈಸಿದ್ದಾರೆ.. ಸದ್ಯ ಪವಿತ್ರಾಗೌಡ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದರೆ, ದರ್ಶನ್‌ ಬಳ್ಳಾರಿ ಜೈಲಿನಲ್ಲಿದ್ದಾರೆ.. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಈಗಾಗಲೇ ಚಾರ್ಜ್‌ಶೀಟ್‌ ಸಲ್ಲಿಕೆ ಮಾಡಿದ್ದಾರೆ.. ಹೀಗಾಗಿ ಪ್ರಮುಖ ಆರೋಪಿಗಳಾದ ಇಬ್ಬರೂ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದಾರೆ.. ಅದರ ವಾದ ಪ್ರತಿವಾದ ಮುಗಿದಿದೆ. ಇಂದು ಕೋರ್ಟ್‌ ಈ ಬಗ್ಗೆ ಆದೇಶ ನೀಡಲಿದೆ..
ಇನ್ನು ವಾರದ ಹಿಂದೆಯೇ ಇದೇ ಪ್ರಕರಣದ ಮೂವರು ಆರೋಪಿಗಳಿಗೆ ಕೋರ್ಟ್‌ ಜಾಮೀನು ನೀಡಿದೆ.. ಆದರೂ ಕೂಡಾ ಅವರು ಇನ್ನೂ ಬಿಡುಗಡೆಯಾಗಿಲ್ಲ.. ತುಮಕೂರು ಜೈಲಿನಲ್ಲಿರುವ ಆರೋಪಿಗಳಾದ ಕಾರ್ತೀಕ್‌ ಅಲಿಯಾಸ್‌ ಕಪ್ಪೆ, ನಿಖಿಲ್‌ ನಾಯಕ್‌ ಹಾಗೂ ಕೇಶವಮೂರ್ತಿಗೆ ಈಗಾಗಲೇ ಜಾಮೀನು ಸಿಕ್ಕಿದೆ.. ಆದ್ರೆ ಬಿಡುಗಡೆ ಮಾಡಬೇಕಂದ್ರೆ ಒಂದು ಲಕ್ಷ ರೂಪಾಯಿ ಶೂರಿಟಿ ಬಾಂಡ್‌ ಹಾಗೂ ಇಬ್ಬರು ವ್ಯಕ್ತಿಗಳ ಶ್ಯೂರಿಟಿ ಬೇಕಾಗಿದೆ.. ಆದ್ರೆ ಯಾರೂ ಶ್ಯೂರಿಟಿ ಕೊಡಲು ಮುಂದೆ ಬರದ ಕಾರಣ ಈ ಮೂವರೂ ಇನ್ನೂ ಜೈಲಿನಲ್ಲೇ ಇದ್ದಾರೆ..

Share Post