BengaluruCinemaCrime

ನಟ ಚೇತನ್‌ ವೀಸಾ ರದ್ದು; 15 ದಿನದಲ್ಲಿ ಭಾರತ ಬಿಡಬೇಕಿದೆ..!

ಬೆಂಗಳೂರು; ಸೋಷಿಯಲ್‌ ಮೀಡಿಯಾದಲ್ಲಿ ಒಂದಷ್ಟು ಹೇಳಿಕೆಗಳನ್ನು ದಾಖಲಿಸಿ, ಹಲವರ ವಿರೋಧಕ್ಕೆ ಕಾರಣವಾಗುತ್ತಿದ್ದ ನಟ ಚೇತನ್‌ ಅವರ ವೀಸಾವನ್ನು ಕೇಂದ್ರ ಸರ್ಕಾರ ರದ್ದು ಮಾಡಿ. ಚೇತನ್‌ ಅಹಿಂಸಾ ಅವರ ಸಾಗರೋತ್ತರ ವೀಸಾ ರದ್ದುಪಡಿಸಲಾಗಿದ್ದು, 15 ದಿನದೊಳಗೆ ಒಸಿಐ ಕಾರ್ಡ್‌ನ್ನು ಹಿಂದಿರುಗಿಸಬೇಕೆಂದು ಕೇಂದ್ರ ಗೃಹ ಇಲಾಖೆ ಚೇತನ್‌ಗೆ ಪತ್ರ ಬರೆದಿದೆ.

ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿಯಿಂದ ಮಾರ್ಚ್‌ 28ರಂದು ಪತ್ರ ಕಳುಹಿಸಲಾಗಿದ್ದು, ಏಪ್ರಿಲ್‌ 15 ರಂದು ಚೇತನ್‌ ಈ ಪತ್ರವನ್ನು ಸ್ವೀಕಾರ ಮಾಡಿದ್ದಾರೆ. ಚೇತನ್‌ ಪೋಷಕರು ಭಾರತೀಯರು, ಅದರಲ್ಲೂ ಕನ್ನಡಿಗರೇ ಆದರೂ, ಚೇತನ್‌ ಅಮೆರಿಕದಲ್ಲಿ ಜನಿಸಿದ್ದರು. ಹೀಗಾಗಿ ಅವರು ಅಮೆರಿಕ ಪೌರತ್ವವನ್ನು ಪಡೆದಿದ್ದಾರೆ. ಇಷ್ಟು ದಿನ ಚೇತನ್‌ ಅವರು ಸಾಗರೋತ್ತರ ವೀಸಾ ಅಡಿಯಲ್ಲಿ ಭಾರತದಲ್ಲಿ ವಾಸವಾಗಿದ್ದರು.

 

Share Post