Bengaluru

ಪರೀಕ್ಷೆ ಸಮಯದಲ್ಲಿ ಹೋರಾಟ ಬೇಡ; ಗೃಹಸಚಿವ ಆರಗ ಜ್ಞಾನೇಂದ್ರ

ಬೆಂಗಳೂರು(bengaluru) ; ಪರೀಕ್ಷೆ ಸಮಯದಲ್ಲಿ ಹಿಜಾಬ್‌ (hijab), ಕೇಸರಿ ಶಾಲು ಅಂತ ಮನಸ್ಸು ಹಾಳು ಮಾಡಿಕೊಳ್ಳುವುದು ಬೇಡ. ಯೂನಿಫಾರ್ಮ್‌ ಸಮಾನತೆಯ ಸಂಕೇತ ಅದನ್ನು ನಾವು ಪಾಲಿಸೋಣ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ (aaraga gnanendra) ಕರೆ ಕೊಟ್ಟಿದ್ದಾರೆ. ಈ ಬಗ್ಗೆ ವಿಡಿಯೋವೊಂದನ್ನು ಬಿಡುಗಡೆ ಮಾಡಿರುವ ಅವರು, ಪೊಲೀಸ್‌ ಬಲವನ್ನು ಪ್ರಯೋಗಿಸಲು ಯಾರೂ ಅವಕಾಶ ಕೊಡಬಾರದು ಎಂದು ಎಚ್ಚರಿಕೆ ಕೊಟ್ಟಿದ್ದಾರೆ.

ಕೆಲ ಮತೀಯ ಶಕ್ತಿಗಳು ವಿದ್ಯಾರ್ಥಿಗಳನ್ನು ಪ್ರೇರೇಪಿಸುತ್ತಿವೆ. ಕೊರೋನಾದಿಂದ ಕೆಲಸ ಸಮಯ ತರಗತಿಗಳು ನಡೆಯಲಿಲ್ಲ. ಈ ಬಾರಿ ತರಗತಿಗಳು ನಡೆದಿವೆ. ಹೀಗಾಗಿ ವಿದ್ಯಾರ್ಥಿಗಳು ಚೆನ್ನಾಗಿ ಓದಿ ಪರೀಕ್ಷೆ ಬರೆಯುವುದರ ಕಡೆ ಗಮನ ಕೊಡಬೇಕು. ಇಂತಹ ಹೋರಾಟಗಳನ್ನೆಲ್ಲಾ ಬಿಡಬೇಕು. ಎಲ್ಲರೂ ಈ ಸಂದರ್ಭದಲ್ಲಿ ಶಾಂತಿ ಕಾಪಾಡಬೇಕು. ಪೋಷಕರು ಕೂಡಾ ಮಕ್ಕಳಿಗೆ ಬುದ್ಧಿ ಹೇಳಬೇಕೆಂದು ಆರಗ ಜ್ಞಾನೇಂದ್ರ ಮನವಿ ಮಾಡಿದ್ದಾರೆ.

Share Post