Bengaluru

ಹೊಸ ಕಾರಿನ ಮೇಲೆ ಉರುಳಿಬಿತ್ತು ಮರ; ಕಂಪ್ಲೀಟ್‌ ಜಖಂ!

ಬೆಂಗಳೂರು; ಬೆಂಗಳೂರಲ್ಲಿ ಸ್ವಲ್ಪ ಮಳೆ ಬಂದರೂ ಸಾಕು ಏನಾದರೊಂದು ಅನಾಹುತ ಆಗುತ್ತದೆ.. ಆ ಮಟ್ಟಿಗೆ ಬೆಂಗಳೂರಿನ ಪರಸರ ಹಾಳಾಗಿದೆ.. ನಿನ್ನೆ ಸಂಜೆ ಬೆಂಗಳೂರಿನಲ್ಲಿ ಕೊಂಚ ಮಳೆಯಾಗಿದೆ.. ಇದಕ್ಕೇ ಹಲವಾರು ಮರಗಳು ಉರಳಿವೆ.. ಇನ್ನು ಲಾವೆಲ್ಲೇ ರೋಡ್‌ನಲ್ಲಿ ಹೊಸ ಹೋಂಡಾ ಎಲಿವೇಟ್‌ SUV ಕಾರಿನ ಮೇಲೆ ಬೃಹತ್‌ ಬರ ಉರುಳಿಬಿದ್ದಿದ್ದು, ಕಾರು ಸಂಪೂರ್ಣ ಜಖಂಗೊಂಡಿದೆ..

ಪಾರ್ಕ್‌ ಮಾಡಿದ್ದ ಕಾರಿನ ಮೇಲೆ ಮರ ಉರುಳಿಬಿದ್ದಿದೆ.. ಇದರಿಂದಾಗಿ ಕಾರು ಬಹುತೇಕ ಜಖಂಗೊಂಡಿದೆ.. ಕಾರಿನ ಎಲ್ಲಾ ಗಾಜುಗಳೂ ಪುಡಿಪುಡಿಯಾಗಿವೆ.. ಬಿಬಿಎಂಪಿ ಅರಣ್ಯ ಇಲಾಖೆ ಸಿಬ್ಬಂದಿಯ ನಿರ್ಲಕ್ಷ್ಯಕ್ಕೆ ಅನಾಹುತ ಸಂಭವಿಸಿದೆ ಎಂದು ಆರೋಪಿಸಲಾಗುತ್ತಿದೆ..

ಬಿಬಿಎಂಪಿ ಸಿಬ್ಬಂದಿ ಅಪಾಯಕಾರಿ ಮರಗಳನ್ನು ಗುರುತಿಸಿ, ಅವುಗಳನ್ನು ತೆರವುಗೊಳಿಸಬೇಕು.. ಆದ್ರೆ ಅದನ್ನು ಮಾಡದೇ ಇದ್ದುದರಿಂದ ಈ ದುರಂತ ನಡೆದಿದೆ ಎಂದು ತಿಳಿದುಬಂದಿದೆ.. ಮಾನ್ಸೂನ್ ಆರಂಭಕ್ಕೂ ಮುನ್ನವೇ ಹಳೆ ಮರಗಳನ್ನು ಸಮೀಕ್ಷೆ ಮಾಡುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.

 

Share Post