BengaluruCrime

ಟ್ರಯಾಂಲ್‌ ಲವ್‌ ಸ್ಟೋರಿ; ಒದೆ ಬಿದ್ದಿದ್ದು ಬೇರೆ ಯಾರಿಗೋ..!

ಬೆಂಗಳೂರು; ಯಾರದೋ ಮೇಲಿನ ಕೋಪಕ್ಕೆ ಇನ್ಯಾರೋ ಬಲಿಯಾದರು ಅನ್ನೋದು ತರದ ಸ್ಟೋರಿ ಇದು. ಪ್ರೀತಿ ಮಾಡಿದ್ದು ಯಾರೋ, ಆದ್ರೆ ಒದೆ ಮತ್ಯಾರೋ ತಿಂದಿದಾರೆ. ಹೌದು, ಇದು ಟ್ರಯಾಂಗಲ್‌ ಲವ್‌ ಸ್ಟೋರಿಯಲ್ಲಿ ಸಂಬಂಧವೇ ಇಲ್ಲದ ವ್ಯಕ್ತಿ ಮೇಲೆ ಮಾರಾಕಾಸ್ತ್ರಗಳಿಂದ ಹಲ್ಲೆ ಮಾಡಿರುವ ಘಟನೆ ಮಾಗಡಿ ರಸ್ತೆಯಲ್ಲಿ ನಡೆದಿದೆ.

   ದಸರಾ ಮೆರವಣಿಗೆ ವೇಳೆ ನಡೆದಿದ್ದ ಈ ಕೃತ್ಯವನ್ನು ಸದ್ಯ ಮಾಗಡಿ ರಸ್ತೆ ಪೊಲೀಸರು ಬಯಲಿಗೆ ಎಳೆದಿದ್ದಾರೆ. ಆರೋಪಿ ಮಂಜೇಶ್‌ ಎಂಬಾತ ಯುವತಿಯೊಬ್ಬಳನ್ನು ಪ್ರೀತಿ ಮಾಡುತ್ತಿದ್ದ. ಆದ್ರೆ ಆ ಯುವತಿ ನಿತಿನ್‌ ಎಂಬಾತನ ಜೊತೆ ತಿರುಗಾಡುತ್ತಿದ್ದಳು. ಇದ್ರಿಂದ ಆಕ್ರೋಶಗೊಂಡಿದ್ದ ಮಂಜೇಶ್‌, ಮಾತುಕತೆಯಾಡಬೇಕೆಂದು ನಿತಿನ್‌ನನ್ನು ಕರೆದಿದ್ದ. ಈ ವೇಳೆ ನಿತಿನ್‌ ತನ್ನ ಸಹೋದರನ ಜೊತೆ ಬರೋದಾಗಿ ಹೇಳಿದ್ದ.

ಆದ್ರೆ ನಿತಿನ್‌ ಅಂದುಕೊಂಡ ಟೈಮ್‌ಗೆ ಬಂದಿಲ್ಲ. ಆದ್ರೆ ಆ ಸ್ಥಳದಲ್ಲಿ ಯಾರೋ ಇಬ್ಬರು ನಿಂತಿದ್ದರು. ಅದರಲ್ಲಿ ದೀಪು ಎಂಬಾತನನ್ನು ನೋಡಿ ಈತನೇ ನಿತಿನ್‌ ಎಂದು ತಪ್ಪು ತಿಳಿದ ಮಂಜೇಶ್‌ ಅಂಡ್‌ ಗ್ಯಾಂಡ್‌ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದೆ. ಈ ವೇಳೆ ನಿತಿನ್‌ ನಾನಲ್ಲ ಎಂದು ದೀಪು ಹೇಳಿದರೂ ಅವರು ಕೇಳಿಸಿಕೊಂಡಿಲ್ಲ.

ಘಟನೆ ಸಂಬಂಧ ಗಡಿ ರಸ್ತೆ ಪೊಲೀಸರು ಮಂಜೇಶ್​ನನ್ನು ಬಂಧಿಸಿದ್ದಾರೆ.  ಉಳಿದವರಿಗಾಗಿ ಶೋಧಕಾರ್ಯ ನಡೆಯುತ್ತಿದೆ.

 

Share Post