BengaluruPolitics

ಶೆಟ್ಟರ್‌ ಕಾಂಗ್ರೆಸ್‌ ಪಕ್ಷ ತೊರೆದಿದ್ದೇ ಒಳ್ಳೆಯದಾಯ್ತು; ಡಿ.ಕೆ.ಶಿವಕುಮಾರ್‌

ಬೆಂಗಳೂರು; ಅಲ್ಪಸಂಖ್ಯಾತ ಸಮಯದಾಯ ಶೆಟ್ಟರ್‌ ಅವರನ್ನು ಒಪ್ಪಿರಲಿಲ್ಲ. ಹೀಗಾಗಿ ಅವರನ್ನಿಟ್ಟುಕೊಂಡು ಪಕ್ಷ ಸಂಘಟನೆ ಕೂಡಾ ಕಷ್ಟವಾಗುತ್ತಿತ್ತು. ಹೀಗಾಗಿ ಅವರು ಬಿಜೆಪಿ ಹೋಗಿದ್ದೇ ಒಳ್ಳೆಯದಾಯ್ತು ಎಂದು ಡಿಸಿಎಂ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿರುವ ಅವರು, ಕಾಂಗ್ರೆಸ್‌ ಪಕ್ಷ ಸಮುದ್ರ ಇದ್ದಂತೆ. ನೂರಾರು ಜನ ಬರ್ತಾರೆ, ಹೋಗ್ತಾರೆ. ಇದನ್ನೆಲ್ಲಾ ನಾವು ಲೆಕ್ಕಕ್ಕೆ ಹಾಕಿಕೊಳ್ಳೋದಿಲ್ಲ ಎಂದು ಹೇಳಿದರು.ʼ

ಧಾರವಾಡದಲ್ಲಿ ಕಾಂಗ್ರೆಸ್‌ ಗೆಲ್ಲುತ್ತೆ ಎಂಬ ವಿಶ್ವಾಸ ಇತ್ತು. ಆದ್ರೆ ಶೆಟ್ಟರ್‌ ಅವರು ಕಾಂಗ್ರೆಸ್‌ಗೆ ಬಂದರು. ಮಾಜಿ ಸಿಎಂ ಎಂಬ ಕಾರಣಕ್ಕೆ ಅವರಿಗೆ ಗೌರವ ಕೊಟ್ಟು ಟಿಕೆಟ್‌ ನೀಡಿದೆವು. ನಮ್ಮ ಕಾರ್ಯಕರ್ತರು ಅವರಿಗಾಗಿ ತ್ಯಾಗ ಮಾಡಿದರು. ಆದರೂ ಶೆಟ್ಟರ್‌ ಗೆಲ್ಲಲಿಲ್ಲ. ಗೆಲ್ಲದಿದ್ದರೂ ಆವರನ್ನು ಪರಿಷತ್‌ ಸದಸ್ಯರನ್ನಾಗಿ ಮಾಡಿದೆವು.  ಆದರೂ ಅವರು ಪಕ್ಷ ಬಿಟ್ಟುಹೋಗಿದ್ದಾರೆ ಎಂದು ಡಿ.ಕೆ.ಶಿವಕುಮಾರ್‌ ವಾಗ್ದಾಳಿ ನಡೆಸಿದರು.

ಅವರು ಈ ಹಿಂದೆ ಬಿಜೆಪಿ ವಿರುದ್ಧ ಹಲವು ಆರೋಪಗಳನ್ನು ಮಾಡಿದ್ದರು. ಈಗ ಅದೇ ಪಕ್ಷಕ್ಕೆ ವಾಪಸ್‌ ಹೋಗಿದ್ದಾರೆ. ಆಗ ಅವರು ಬಿಜೆಪಿ ವಿರುದ್ಧ ಮಾಡಿದ್ದ ಆರೋಪಗಳಿಗೆ ಅವರೇ ಉತ್ತರ ಕೊಡಬೇಕು ಎಂದೂ ಡಿ.ಕೆ.ಶಿವಕುಮಾರ್‌ ಆಗ್ರಹಿಸಿದರು.ʼ

 

Share Post