BengaluruPolitics

ವಿಜಯೇಂದ್ರಗೆ ಹೂಗುಚ್ಛ; ಬೆನ್ನು ತಟ್ಟಿದ ಅಮಿತ್‌ ಶಾ

ಬೆಂಗಳೂರು; ಯಡಿಯೂರಪ್ಪ ಹಾಗೂ ಅವರ ಪುತ್ರ ವಿಜಯೇಂದ್ರರನ್ನು ಬಿಜೆಪಿಯಲ್ಲಿ ಮೂಲೆಗುಂಪು ಮಾಡಲಾಗುತ್ತಿದೆ ಎಂದು ಹೇಳಲಾಗುತ್ತಿತ್ತು. ಆದ್ರೆ ಇಂದು ಇದಕ್ಕೆ ವ್ಯತಿರಿಕ್ತ ವಾತಾವರಣ ಕಂಡುಬಂದಿದೆ. ಕೇಂದ್ರ ಗೃಹ ಸಚಿವ ಅಮಿತ್‌ ಶಾ ಯಡಿಯೂರಪ್ಪ ಹಾಗೂ ಅವರ ಪುತ್ರ ವಿಜಯೇಂದ್ರಗೆ ಪ್ರಾಮುಖ್ಯತೆ ಕೊಡುತ್ತಿರುವುದು ಕಂಡುಬಂದಿದೆ.

ರಾತ್ರಿ ಬೆಂಗಳೂರಿಗೆ ಆಗಮಿಸಿರುವ ಅಮಿತ್‌ ಶಾ ಅವರು ಇಂದು ಬೆಳಗ್ಗೆ ಯಡಿಯೂರಪ್ಪ ಅವರ ನಿವಾಸಕ್ಕೆ ಉಪಹಾರಕ್ಕೆಂದು ಹೋಗಿದ್ದರು. ಈ ವೇಳೆ ಅಮಿತ್‌ ಶಾರನ್ನು ಬರಮಾಡಿಕೊಳ್ಳಲು ಯಡಿಯೂರಪ್ಪ ಹೂಗುಚ್ಛದೊಂದಿಗೆ ಬಂದಿದ್ದರು. ಈ ವೇಳೆ ಅಮಿತ್‌ ಶಾ ಅವರು ಹೂಗುಚ್ಛವನ್ನು ವಿಜಯೇಂದ್ರಗೆ ನೀಡುವಂತೆ ಹೇಳಿದರು. ಯಡಿಯೂರಪ್ಪ ಕೈಯಿಂದ ವಿಜಯೇಂದ್ರಗೆ ಹೂಗುಚ್ಛ ಕೊಡಿಸಿದರು. ಅನಂತರ ವಿಜಯೇಂದ್ರ ಬೆನ್ನು ತಟ್ಟಿದ ಅಮಿತ್‌ ಶಾ, ಅವರೊಂದಿಗೆ ಫೋಟೋಗೆ ಕೂಡಾ ಫೋಸ್‌ ಕೊಟ್ಟರು. ಅನಂತರ ಯಡಿಯೂರಪ್ಪ ಮತ್ತೊಂದು ಹೂಗುಚ್ಛವನ್ನು ಅಮಿತ್‌ ಶಾಗೆ ನೀಡಿದರು.

Share Post