Bengaluru

ಕಾಲುವೆ ಕಾಮಗಾರಿ ವೇಲೆ ಕುಸಿದ ಕಾಂಕ್ರೀಟ್‌; ಎಂಟು ಮಂದಿಗೆ ಗಾಯ

ಬೆಂಗಳೂರು; ರಾಜಕಾಲುವೆ ಮೇಲೆ ಬ್ರಿಡ್ಜ್‌ ನಿರ್ಮಾಣದ ವೇಳೆ ಹಾಕಿದ್ದ ಕಾಂಕ್ರೀಟ್‌ ಕುಸಿದು ಎಂಟು ಕಾರ್ಮಿಕರು ಗಾಯಗೊಂಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಶ್ರೀನಗರ ಬಳಿಯ ಕಾಳಿದಾಸ ಸರ್ಕಲ್‌ ಬಳಿ ಈ ದುರ್ಘಟನೆ ನಡೆದಿದೆ. 

 

ಬಿಬಿಎಂಪಿ ನಿನ್ನೆಯಿಂದ ರಾಜಕಾಲುವೆ ಮೇಲೆ ಮೊಲ್ಡಿಂಗ್ ಕಾಮಗಾರಿ ಶುರು ಮಾಡಿತ್ತು. ಇಂದು ಕಾರ್ಮಿಕರು ಕೆಲಸ ಮಾಡುವ ವೇಳೆಯಲ್ಲಿ ಘಟನೆ ನಡೆದಿದೆ. ರಾಜಕಾಲುವೆ ಕಾಮಗಾರಿ ಸಂದರ್ಭದಲ್ಲೇ ಬ್ರಿಡ್ಜ್ ಕುಸಿದಿದೆ. ಪರಿಣಾಮ 8 ಮಂದಿ ಕಾರ್ಮಿಕರು ಬ್ರಿಡ್ಜ್ ಮೇಲಿಂದ ಬಿದ್ದಿದ್ದಾರೆ. ಇದ್ರಿಂದ ಕಾರ್ಮಿಕರಿಗೆ ಗಾಯಗಳಾಗಿವೆ. ಕೋಲ್ಕತಾ ಮೂಲದ ಮೀರ್ ಖಾಸಿಂ (24) ಎಂಬುವವರಿಗೆ ತೀವ್ರ ಗಾಯಗಳಾಗಿವೆ. ಆಸಿಬುಲ್ (22), ಶಿವಪ್ರಸಾದ್ (33), ರೆಹಮಾನ್‌ಗೆ ಸಣ್ಣಪುಟ್ಟ ಗಾಯಗಳಾಗಿವಬೆ ಎಂದು ತಿಳಿದುಬಂದಿದೆ.

 

Share Post