BengaluruCrime

ರೌಡಿಶೀಟರ್‌ ಪ್ರಶಾಂತ್ ಕೊಲೆ ಕೇಸ್‌; ಆರೋಪಿ ಅರ್ಜುನ್‌ ಕೋರ್ಟ್‌ಗೆ ಶರಣು

ಬೆಂಗಳೂರು; ಜೂನ್‌ 5ರಂದು ಬೆಂಗಳೂರಿನ ಪುಲಿಕೇಶಿ ನಗರದಲ್ಲಿ ನಡೆದ ರೌಡಿಶೀಟರ್‌ ಪ್ರಶಾಂತ್‌ ಕೊಲೆ ಪ್ರಕರಣದ ಆರೋಪಿ ಅರ್ಜುನ್‌ ಇಂದು ನ್ಯಾಯಾಲಯಕ್ಕೆ ಶರಣಾಗಿದ್ದಾನೆ. ಜೂನ್‌ 5 ರಂದು ಬೆಳಗ್ಗೆ ಅರ್ಜುನ್‌ ತಮ್ಮ ಮನೆ ಮುಂದೆ ಮೀನು ಖರೀದಿ ಮಾಡುತ್ತಿದ್ದ. ಈ ವೇಳೆ ರೌಡಿ ಶೀಟರ್‌ ಪ್ರಶಾಂತ್‌ ಜಗಳ ತೆಗೆದಿದ್ದ. ಇಬ್ಬರ ನಡುವಿನ ಜಗಳ ತಾರಕಕ್ಕೇರಿದ್ದು, ಅರ್ಜುನ್‌ ಚಾಕುವಿನಿಂದ ಚುಚ್ಚಿ ಪ್ರಶಾಂತ್‌ನ ಕೊಲೆ ಮಾಡಿ ಪರಾರಿಯಾಗಿದ್ದ.

ಕಳೆದ ನಾಲ್ಕು ದಿನಗಳಿಂದ ನಾಪತ್ತೆಯಾಗಿದ್ದ ಅರ್ಜುನ್‌ ನೇರವಾಗಿ ನ್ಯಾಯಾಲಯಕ್ಕೆ ಬಂದು ಶರಣಾಗಿದ್ದಾನೆ.

Share Post