BengaluruCrime

ನೆಲಮಂಗಲ ಬಳಿ 5 ಖಾಸಗಿ ಬಸ್‌ಗಳ ಡಿಕ್ಕಿ; 25 ಮಂದಿಗೆ ಗಾಯ!

ಬೆಂಗಳೂರು; ಬೆಳ್ಳಂಬೆಳಗ್ಗೆ ಬೆಂಗಳೂರು-ತುಮಕೂರು ಹೆದ್ದಾರಿಯಲ್ಲಿ ಸರಣಿ ಅಪಘಾತ ಸಂಭವಿಸಿದೆ. ಐದು ಖಾಸಗಿ ಬಸ್‌ಗಳು ಪರಸ್ಪರ ಡಿಕ್ಕಿಯಾಗಿವೆ. ಇದರಿಂದಾಗಿ 25 ಮಂದಿ ಗಾಯಗೊಂಡಿದ್ದು, ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗಳಿಗೆ ದಾಖಲು ಮಾಡಿ, ಚಿಕಿತ್ಸೆ ನೀಡಲಾಗುತ್ತಿದೆ.

ನೆಲಮಂಗಲ ಬಳಿಯ ತೊಣಚಿನಗುಪ್ಪೆ ಬಳಿ ಈ ಸರಣಿ ಅಪಘಾತ ಸಂಭವಿಸಿದೆ. ಇದರಿಂದಾಗಿ ಕೆಲಕಾಲ ಟ್ರಾಫಿಕ್‌ ಜಾಮ್‌ ಉಂಟಾಗಿತ್ತು. ಈ ಭಾಗದಲ್ಲಿ ಓಡಾಡುವ ವಾಹನಗಳ ಸವಾರರು ಪರದಾಡುವಂತಾಯಿತು. ನಂತರ ಬಂದ ಟ್ರಾಫಿಕ್‌ ಪೊಲೀಸರು, ಅಪಘಾತಕ್ಕೀಡಾದ ಬಸ್‌ಗಳನ್ನು ತೆರವು ಮಾಡಿಸಿದರು. ಇದರಿಂದಾಗಿ ವಾಹನ ಓಡಾಟ ಎಂದಿನಂತೆ ಸರಾಗವಾಗಿದೆ.

 

Share Post