Bengaluru

40 ಪರ್ಸೆಂಟ್‌ ಕಮೀಷನ್‌ ಆರೋಪ; ದಾಖಲೆ ಕೊಟ್ರೆ ನಾಳೆಯೇ ತನಿಖೆ – ಸಿಎಂ ಬೊಮ್ಮಾಯಿ

ಬೆಂಗಳೂರು; 40 ಪರ್ಸೆಂಟ್‌ ಕಮೀಷನ್‌ ಆರೋಪಕ್ಕೆ ದಾಖಲೆ ಕೊಟ್ಟರೆ ನಾಳೆಯೇ ಲೋಕಾಯುಕ್ತ ತನಿಖೆಗೆ ನೀಡಲಾಗುತ್ತದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಕಾಂಗ್ರೆಸ್‌ ಪೇಸಿಎಂ ಅಭಿಯಾನದ ಬಗ್ಗೆ ಮಾತನಾಡಿದ ಅವರು, ಕಾಂಗ್ರೆಸ್‌ನವರು ಯಾವ ಕ್ಯಾಂಪೇನ್‌ ಬೇಕಾದರೂ ಮಾಡಲಿ. ಕೊನೆಗೆ ಸತ್ಯಕ್ಕೆ ಜಯ ಸಿಗುತ್ತೆ ಎಂದು ಹೇಳಿದರು.

ಭ್ರಷ್ಟಾಚಾರ ಇಟ್ಕೊಂಡು ಅವರೇ ಕ್ಯಾಂಪೇನ್‌ ಮಾಡ್ತಿದ್ದಾರೆ. ಪುರಾವೆ ಇಲ್ಲದೆ ಮಾತನಾಡುವ ಪ್ರವೃತ್ತಿ ನಡೆಯುವುದಿಲ್ಲ ಎಂದ ಸಿಎಂ ಬೊಮ್ಮಾಯಿ, ಆರೋಪ ವಿಚಾರದಲ್ಲಿ ನಾವು ಮುಕ್ತರಿದ್ದೇವೆ. ದಾಖಲೆ ಕೊಟ್ಟರೆ ಲೋಕಾಯುಕ್ತ ತನಿಖೆಗೆ ಒಪ್ಪಿಸಲಾಗುತ್ತದೆ. ಈ ಬಗ್ಗೆ ಇದುವರೆಗೆ ಯಾರೂ ಕೂಡಾ ದಾಖಲೆ ಕೊಟ್ಟಿಲ್ಲ ಎಂದು ಸಿಎಂ ಹೇಳಿದರು.

Share Post