Crime

ಟಿವಿ ನೋಡೋದು ಬಿಟ್ಟು, ದುಡಿಮೆ ಮಾಡು ಮಗ ಅಂದಿದ್ದಕ್ಕೆ ಆತ್ಮಹತ್ಯೆ

ಬೆಂಗಳೂರು: ಬುದ್ದಿವಾದ ಹೇಳಿದ್ದಕ್ಕೆ ತಂದೆ ಮೇಲಿನ ಕೋಪಕ್ಕೆ 23ವರ್ಷದ ಯುವಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ಜೆಜೆ ನಗರದಲ್ಲಿ ನಡೆದಿದೆ.  ಸೈಯ್ಯದ್‌ ಸಾಹೀಲ್‌ ಆತ್ಮಹತ್ಯೆ ಮಾಡಿಕೊಂಡ ಯುವಕ.  ಕೆಲಸಕ್ಕೆ ಹೋಗದೆ ಮನೆಯಲ್ಲಿ ಟಿವಿ ನೋಡಿಕೊಂಡು ಕುಳಿತಿದ್ದ ಸೈಯ್ಯದ್‌ಗೆ ತಂದೆ ಬುದ್ದಿವಾದ ಹೇಳಿದ್ದಾರೆ.

ಸದಾ ಟಿವಿ ನೋಡ್ಕೊಂಡು ಕೂರ್ತಿಯಲ್ಲ, ಹೋಗಿ ಏನಾದ್ರೂ ಕೆಲಸ ಮಾಡ್ಬಾರ್ದಾ ಎಂದು ಗದರಿದ್ದಾರೆ.  ಅಷ್ಟಕ್ಕೆ ಕೋಪಗೊಂಡು ಅಡುಗೆ ಮನೆಗೆ ತೆರಳಿ ಚಾಕುವಿನಿಂದ ಹೊಟ್ಟೆ ಹಾಗೂ ಕುತ್ತಿಗೆಗೆ ಇರಿದುಕೊಂಡಿದ್ದಾನೆ. ರಾತ್ರಿ ಸರಿಸುಮಾರು 10 ಗಂಟೆ ವೇಳೆಗೆ ಈ ದುರ್ಘಟನೆ‌ ನಡೆದಿದೆ. ತಕ್ಷಣವೇ ಪೋಷಕರು ಸಾಹೀಲ್‌ನನ್ನು ಆಸ್ಪತ್ರೆಗೆ ಸೇರಿಸಿದ್ದಾರೆ ಆದರೆ ಚಿಕಿತ್ಸೆ ಫಲಕಾರಿಯಾಗದೆ ಸೈಯ್ಯದ್‌ ಮೃತಪಟ್ಟಿದ್ದಾನೆ. ಘಟನೆ ಸಂಬಂಧ ಜೆಜೆ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share Post