CrimeDistrictsHealth

ಕುಡಿಯುವ ನೀರಿನ ಟ್ಯಾಂಕ್ ಗೆ ವಿಷ ಬೆರೆಸಿದ ದುಷ್ಕರ್ಮಿಗಳು!

ರಾಯಚೂರು; ಚಾಮರಾಜನಗರ ಜಿಲ್ಲೆಯಲ್ಲಿ ಕೆಲ ವರ್ಷಗಳ ಹಿಂದೆ ಪ್ರಸಾದದಲ್ಲಿ ವಿಷ ಬೆರೆಸಲಾಗಿತ್ತು.. ಹಲವು ಮಂದಿ ಸಾವನ್ನಪ್ಪಿದ್ದರು.. ಇದೀಗ ಇಂತಹದ್ದೇ ಒಂದು ಕೃತ್ಯಕ್ಕೆ ರಾಯಚೂರು ಜಿಲ್ಲೆಯಲ್ಲಿ ಯತ್ನಿಸಲಾಗಿದೆ.. ಆದ್ರೆ ಗ್ರಾಮಸ್ಥರ ಸಮಯ ಪ್ರಜ್ಞೆಯಿಂದ ದುರಂತ ತಪ್ಪಿದೆ.

   ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ತವಗಾ ಗ್ರಾಮದಲ್ಲಿ ಈ ಘಟನೆ ನಡೆದಿದೆ.. ಕುಡಿಯುವ ನೀರಿನ ಟ್ಯಾಂಕ್ ಗೆ ಯಾರೋ ವಿಷ ಬೆರೆಸಿದ್ದಾರೆ.. ಅದೇ ನೀರು ಎಲ್ಲ ಮನೆಗಳಿಗೂ ಸರಬರಾಜು ಮಾಡಲಾಗಿತ್ತು.. ಆದ್ರೆ ನೀರಿನಲ್ಲಿ ನೊರೆ ಹಾಗೂ ದುರ್ವಸನೆ ಬರುತ್ತಿದ್ದರಿಂದ ಜನ ಎಚೆತ್ತುಕೊಂಡಿದ್ದಾರೆ..

  ನೀರಿನ ಟ್ಯಾಂಕ್ ಪರಿಶೀಲನೆ ಮಾಡಿದಾಗ ವಿಷ ಬೆರೆಸಿರುವುದು ಗೊತ್ತಾಗಿದೆ.. ಈ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದೆ..

 

Share Post