CrimeNational

ಅಪಘಾತದಲ್ಲಿ ಸ್ನೇಹಿತೆ ಸಾವು!; ಬಸ್‌ ಕೆಳಗೆ ಹಾರಿ ಯುವಕ ಆತ್ಮಹತ್ಯೆ!

ಚೆನ್ನೈ; ತನ್ನ ಸ್ನೇಹಿತ ಅಪಘಾತದಲ್ಲಿ ಸಾವನ್ನಪ್ಪಿದ್ದರಿಂದ ಆಘಾತಗೊಂಡ ಎಂಜಿನಿಯರಿಂಗ್‌ ವಿದ್ಯಾರ್ಥಿಯೊಬ್ಬ ಬಸ್ಸಿನ ಕೆಳಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.. ತಮಿಳುನಾಡು ರಾಜಧಾನಿ ಚೆನ್ನೈನ ಈಸ್ಟ್‌ ಕೋಸ್ಟ್‌ ರಸ್ತೆಯಲ್ಲಿ ನಿನ್ನೆ ಈ ಘಟನೆ ನಡೆದಿದೆ..
20 ವರ್ಷದ ಎಂಜಿನಿಯರಿಂಗ್‌ ಮಾಡುತ್ತಿದ್ದ ಯುವತಿ ಬೈಕ್ ಅಪಘಾತದಲ್ಲಿ ಮೃತಪಟ್ಟಿದ್ದಾಳೆ.. ಇದಾದ ಕೇವಲ ಅರ್ಧ ಗಂಟೆಯಲ್ಲೇ ಆಕೆಯ ಸ್ನೇಹಿತ ಹಾಗೂ ಸಹಪಾಠಿ ಬಸ್ಸಿನ ಕೆಳಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾನೆ.. ಉದಿರಮೆರೂರಿನ ಎಸ್‌.ಯೋಗೇಶ್ವರನ್‌ ಹಾಗೂ ಮುದಾರಂತಕಂನ ಸಬ್ರೀನಾ ಸಾವನ್ನಪ್ಪಿದ ದುರ್ದೈವಿಗಳಾಗಿದ್ದಾರೆ.. ಇಬ್ಬರೂ ಮಹಾಬಲಿಪುರಂಗೆ ಭೇಟಿ ನೀಡಿ ಕಾಲೇಜಿಗೆ ಬೈಕ್ ನಲ್ಲಿ ವಾಪಸ್ಸಾಗುತ್ತಿದ್ದರು. ಈ ವೇಳೆ ಬಸ್‌ ಡಿಕ್ಕಿ ಹೊಡೆದಿದ್ದರಿಂದ ಯುವತಿ ಸಾವನ್ನಪ್ಪಿದ್ದಾಳೆ.. ಇದರಿಂದ ಆಘಾತಗೊಂಡ ಯುವಕ ಮತ್ತೊಂದು ಬಸ್ಸಿನ ಕೆಳಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ..

Share Post