CinemaPolitics

ಸಿದ್ದರಾಮಯ್ಯ ಜೀವನಾಧರಿತ ʻಲೀಡರ್‌ ರಾಮಯ್ಯʼ ಸಿನಿಮಾ ಕತೆ ಏನಾಯ್ತು..?

ಬೆಂಗಳೂರು; ಸಿಎಂ ಸಿದ್ದರಾಮಯ್ಯ ಅವರ ಜೀವನಾಧರಿತ ಸಿನಿಮಾ ಮಾಡುವ ಘೋಷಣೆಯಾಗಿ ಹಲವು ವರ್ಷಗಳು ಕಳೆದಿದ್ದು, ಅದಕ್ಕೆ ಲೀಡರ್‌ ರಾಮಯ್ಯ ಎಂದು ಹೆಸರಿಡಲಾಗಿದೆ.. ಈಗಾಗಲೇ ಸಿದ್ದರಾಮಯ್ಯ ಅವರ ಬಾಲ್ಯದ ಜೀವನದ ಚಿತ್ರೀಕರಣ ಮುಗಿಸಲಾಗಿದೆ.. ತಾರುಣ್ಯ ಹಾಗೂ ರಾಜಕೀಯ ಜೀವನದ ಚಿತ್ರೀಕರಣ ಮಾತ್ರ ಬಾಕಿ ಇದೆ.. ಆದ್ರೆ ಸದ್ಯಕ್ಕೆ ಚಿತ್ರೀಕರಣ ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ ಎಂದು ಹೇಳಲಾಗುತ್ತಿದೆ.. ಚಿತ್ರದಲ್ಲಿ ಸಿದ್ದರಾಮಯ್ಯ ಪಾತ್ರ ಮಾಡುತ್ತಿರುವ ನಟನ ಡೇಟ್ಸ್‌ ಸಿಗದ ಕಾರಣ ಹಾಗೂ ಮುಡಾ ಹಗರಣದ ಹಿನ್ನೆಲೆಯಲ್ಲಿ ಸದ್ಯ ಮುಂದಿನ ಹಂತದ ಚಿತ್ರೀಕರಣ ಸ್ಥಗಿತವಾಗಿ ಎಂದು ತಿಳಿದುಬಂದಿದೆ..
ಸಿದ್ದರಾಮಯ್ಯ ಅವರ ಪಾತ್ರವನ್ನು ತಮಿಳಿನ ಖ್ಯಾತ ನಟ ವಿಜಯ್‌ ಸೇತುಪತಿ ಮಾಡುತ್ತಿದ್ದಾರೆ.. ಲೀಡರ್‌ ಸಿದ್ದರಾಮಯ್ಯ ಅಲ್ಲದೆ ವಿಜಯ್‌ ಸೇತುಪತಿಯವರು ಈಗಾಗಲೇ ಹಲವು ಸಿನಿಮಾಗಳ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದಾರೆ.. ಹೀಗಾಗಿ ಡೇಟ್ಸ್‌ ಸಮಸ್ಯೆ ಆಗಿದೆ.. ಇದರ ಜೊತೆ ಇದೇ ವೇಳೆ ಮುಡಾ ಸಮಸ್ಯೆ ಕೂಡಾ ಎದುರಾಗಿದೆ.. ಹೀಗಾಗಿ ಚಿತ್ರತಂಡ ರಾಜಕೀಯ ಬೆಳವಣಿಗೆ ಗಮನಿಸುತ್ತಿದ್ದು, ಚಿತ್ರದಲ್ಲಿ ಮುಡಾ ಪ್ರಕರಣದ ಹಿನ್ನೆಲೆಯ ಸನ್ನಿವೇಶಗಳನ್ನೂ ಸೇರಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ..
ವಿಜಯ್‌ ಸೇತುಪತಿ ಡೇಟ್ಸ್‌ ಸಮಸ್ಯೆಯಾಗಿದೆ.. ಈ ಕಾರಣದಿಂದ ಚಿತ್ರೀಕರಣ ಸದ್ಯಕ್ಕೆ ನಿಲ್ಲಿಸಿದ್ದೇವೆ. ಮುಂದಿನ ದಿನಗಳಲ್ಲಿ ಚಿತ್ರೀಕರಣ ಮುಂದುವರೆಸುತ್ತೇವೆ ಎಂದು ಕೊಪ್ಪಳದಲ್ಲಿ ಚಿತ್ರದ ನಿರ್ಮಾಪಕ ಹಯ್ಯಾತ್‌ ಪೀರ್‌ ಅವರು ಹೇಳಿಕೆ ನೀಡಿದ್ದಾರೆ..

Share Post