CrimeHealthPolitics

ಆರ್‌ಜೆಡಿ ನಾಯಕನ ಮೇಲೆ ಗುಂಡಿನ ದಾಳಿ; ಸ್ಥಿತಿ ಚಿಂತಾಜನಕ!

ಬಿಹಾರ; ಬೆಳ್ಳಂಬೆಳಗ್ಗೆ ಬಿಹಾರದಲ್ಲಿ ಗುಂಡಿನ ಮೊರೆತ ಮೊಳಗಿದೆ.. ಆರ್‌ಜೆಡಿ ಮುಖಂಡ ಪಂಕಜ್‌ ಯಾದವ್‌ ಮೇಲೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದಾರೆ.. ಪಂಕಜ್‌ ಯಾದವ್‌ ಅವರು ಬೆಳಗ್ಗೆ ವಾಕಿಂಗ್‌ಗೆಂದು ಹೋಗಿದ್ದರು.. ಪಾರ್ಕ್‌ನಲ್ಲಿ ವಾಕ್‌ ಮಾಡುತ್ತಿರುವ ವೇಳೆ ದಿಢೀರ್‌ ಅಂತ ಬಂದೂಕುದಾರಿಗಳು ಎಂಟ್ರಿ ಕೊಟ್ಟಿದ್ದಾರೆ.. ಪಂಕಜ್‌ ಯಾದವ್‌ ಎದೆಯನ್ನೇ ಗುರಿಯಾಗಿಸಿಕೊಂಡು ಹಲವು ಸುತ್ತು ಗುಂಡು ಹಾರಿಸಿದ್ದಾರೆ..
ಆರ್‌ಜೆಡಿ ನಾಯಕ ಪಂಕಜ್‌ ಯಾದವ್‌ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.. ಅವರ ಸ್ಥಿತಿ ಈಗ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ.. ಗುಂಡು ಹಾರಿಸಿದವರು ಕೂಡಲೇ ಪರಾರಿಯಾಗಿದ್ದಾರೆ.. ಅವರು ಯಾರು..? ಯಾಕೆ ಗುಂಡು ಹಾರಿಸಿದರು ಅನ್ನೋದು ಇನ್ನೂ ಗೊತ್ತಾಗಿಲ್ಲ.. ಸ್ಥಳಕ್ಕೆ ಸಫಿಯಾ ಸರಾಯ್, ಖಾಸಿಂ ಬಜಾರ್ ಮತ್ತು ಕೊತ್ವಾಲಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ..
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಸುತ್ತಮುತ್ತಲಿನ ಸಿಸಿಟಿವಿ ಪರಿಶೀಲನೆ ಮಾಡುತ್ತಿದ್ದಾರೆ.. ದುಷ್ಕರ್ಮಿಗಳ ಬಂಧನಕ್ಕೆ ಹಲವು ವಿಶೇಷ ಪೊಲೀಸ್‌ ತಂಡಗಳನ್ನು ರಚನೆ ಮಾಡಲಾಗಿದೆ.. ಮೊನ್ನೆಯಷ್ಟೇ ದುಷ್ಕರ್ಮಿಗಳು ಪಾಟ್ನಾದಲ್ಲಿ ರಿಯಲ್‌ ಎಸ್ಟೇಟ್‌ ಮಧ್ಯವರ್ತಿಯೊಬ್ಬರನ್ನು ಗುಂಡಿಕ್ಕಿ ಕೊಂದಿದ್ದರು.

Share Post