BengaluruPolitics

ಸಿದ್ದರಾಮೋತ್ಸವ; ಡಿಕೆಶಿ ಭಾಷಣ ಲೀಕ್‌ – ಮುಜುಗರಕ್ಕೀಡಾದ ಮಾಧ್ಯಮ ವಿಭಾಗ

ಬೆಂಗಳೂರು; ಬುಧವಾರ ದಾವಣಗೆರೆಯಲ್ಲಿ ನಡೆಯಲಿರುವ ಸಿದ್ದರಾಮಯ್ಯ ಅಮೃತ ಮಹೋತ್ಸವದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಮಾಡಬೇಕಿದ್ದ ಭಾಷಣ ಎರಡು ದಿನ ಮುನ್ನವೇ ಸೋರಿಕೆ ಆಗಿದೆ. ಡಿ.ಕೆ.ಶಿವಕುಮಾರ್‌ಗಾಗಿ ಸಿದ್ಧಪಡಿಸಿದ್ದ ಭಾಷಣದ ಪ್ರತಿ ಕಣ್ತಪ್ಪಿನಿಂದ ಪಕ್ಷದ ವಿವಿಧ ವಾಟ್ಸ್‌ ಆಪ್‌ ಗ್ರೂಪ್‌ಗಳಲ್ಲಿ ಪೋಸ್ಟ್‌ ಆಗಿದ್ದು, ಇದರಿಂದ ಕೆಪಿಸಿಸಿ ಮಾಧ್ಯಮ ವಿಭಾಗ ಮುಜುಗರಕ್ಕೆ ಸಿಲುಕಿದೆ.

 ತಪ್ಪಿನ ಅರಿವಾಗಿ ತಕ್ಷಣವೇ ಕೆಪಿಸಿಸಿ ಮಾಧ್ಯಮ ವಿಭಾಗ ಭಾಷಣದ ಪ್ರತಿಯನ್ನು ಅಳಿಸಿ ಹಾಕಿದೆ. ಇದರಲ್ಲಿ ಸಿದ್ದರಾಮಯ್ಯ ಅವರಿಗೆ ಪರೋಕ್ಷವಾಗಿ ಟಾಂಗ್​ ನೀಡುವ ಕೆಲಸಕ್ಕೆ ಡಿಕೆಶಿ ಮಂದಾಗಿದ್ರಾ ಎಂಬ ಚರ್ಚೆ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.

  ಡಿ.ಕೆ.ಶಿವಕುಮಾರ್‌ ಗಾಗಿ ಸಿದ್ಧಪಡಿಸಿದ ಭಾಷಣದ ಪ್ರತಿಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರಲು ನಾವು ಏನು ಕೆಲಸ ಮಾಡಬೇಕೋ ಅದನ್ನು ಮಾಡೋಣ. ನಾವು ಯಾವ ಸ್ಥಾನಮಾನಕ್ಕೆ ಅರ್ಹರೋ ಅದನ್ನು ಪಕ್ಷ ನೀಡುತ್ತದೆ ಎಂದು ಉಲ್ಲೇಖ ಮಾಡಲಾಗಿದೆ. ಇದು ಪರೋಕ್ಷವಾಗಿ ಸಿದ್ದರಾಮಯ್ಯ ಅವರಿಗೆ ಟಾಂಗ್ ನೀಡಿದಂತಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

 

Share Post