BengaluruPolitics

ನನ್ನನ್ನು ಜೈಲಿಗೆ ಹಾಕಿಸಲು ಸಂಚು ನಡೆದಿದೆ; ಹೆಚ್‌.ಡಿ.ಕುಮಾರಸ್ವಾಮಿ

ನವದೆಹಲಿ; ಶತಾಯಗತಾಯ ನನ್ನನ್ನು ಒಂದು ಬಾರಿಯಾದರೂ ಜೈಲಿಗೆ ಹಾಕಿಸಲು ಸಂಚು ರೂಪಿಸಲಾಗಿದೆ ಎಂದು ಕೇಂದ್ರ ಸಚಿವ ಹೆಚ್‌.ಡಿ.ಕುಮಾರಸ್ವಾಮಿ ಆರೋಪ ಮಾಡಿದ್ದಾರೆ.. ದೆಹಲಿಯಲ್ಲಿ ಮಾತನಾಡಿರುವ ಅವರು, ಲೋಕಾಯುಕ್ತ ಎಡಿಜಿಪಿ ಚಂದ್ರಶೇಖರ್ ವಿರುದ್ಧ ಹರಿಹಾಯ್ದಿದ್ದಾರೆ.. ಮೊನ್ನೆ ಚಂದ್ರಶೇಖರ್‌ ಹೇಳಿದ ಮಾತನ್ನು ಗಮನಿಸಿದ್ದೇನೆ. ನನ್ನನ್ನು ಒಂದು ದಿನವಾದ್ರೂ ಜೈಲಿಗೆ ಕಳುಹಿಸಬೇಕೆಂದು ಮಾತಾಡಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ..
ನಾನು ಜಾಮೀನು ಪಡೆದಿದ್ದಾನೆ.. ಹಾಗಂತ ನಾನು ತಪ್ಪು ಮಾಡಿದ್ದಕ್ಕೆ ಜಾಮೀನು ಪಡೆದಿಲ್ಲ. ನನ್ನನ್ನು ಆರೋಪಿ ಸ್ಥಾನದಲ್ಲಿ ನಿಲ್ಲಿಸಲಾಗಿದೆ. ಈ ಕಾರಣಕ್ಕಾಗಿ ನಾನು ಜಾಮೀನು ಪಡೆದುಕೊಂಡಿದ್ದಾನೆ ಎಂದು ಕುಮಾರಸ್ವಾಮಿ ಇದೇ ವೇಳೆ ಹೇಳಿದ್ದಾರೆ.. ಈ ರೀತಿಯ ರಾಜಕೀಯ ಪ್ರೇರಿತ ಕೇಸ್‌ ಗಳ ಮೂಲಕ ನನ್ನನ್ನು ಏನೂ ಮಾಡಲು ಸಾಧ್ಯವಿಲ್ಲ ಎಂದಿರುವ ಕುಮಾರಸ್ವಾಮಿ, ನಿರಪರಾಧಿಗಳನ್ನು ಅಪರಾಧಿ ಮಾಡಲು ಎಂದಿಗೂ ಸಾಧ್ಯವಿಲ್ಲ ಎಂದು ಹೇಳಿದ್ದಾರೆ..

Share Post